ಅಂತಿಮವಾಗಿ ಹಳೆ ಕಚೇರಿ ಜಾಗದಲ್ಲಿ ನಿರ್ಮಾಣಕ್ಕೆ ಮುಂದಾಗಿ ಶಾಸಕರಾಗಿದ್ದ ಬಿ.ಬಿ.ರಾಮಸ್ವಾಮಿ ಗೌಡ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದರು. ನಂತರ ಶಾಸಕ ಡಿ.ನಾಗರಾಜಯ್ಯ ಅವಧಿಯಲ್ಲಿ ಹೆಚ್ಚಿನ ಅನುದಾನ ದೊರೆತು ಕಾಮಗಾರಿ ಕುಂಟುತ್ತ ಸಾಗಿತ್ತು. ಡಾ.ರಂಗನಾಥ್ ಶಾಸಕರಾಗಿದ್ದ ಮೊದಲ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಶಿಥಿಲವಾಗಿದ್ದ ಹಳೇ ಕಟ್ಟಡ ಸೋರುತ್ತಿದ್ದ ಕಾರಣ ಉದ್ಘಾಟನೆಗೂ ಮುನ್ನ ಅಧಿಕಾರಿಗಳು ಹೊಸ ಕಟ್ಟಡದಲ್ಲಿ ಸೇರಿಕೊಂಡು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.