<p>ತುಮಕೂರು: ಬಸವಣ್ಣನವರ ವಚನಗಳಲ್ಲಿನ ಚಿಂತನೆಗಳು ಸರ್ವಸತ್ಯವಾಗಿವೆ. 900 ವರ್ಷಗಳು ಕಳೆದರೂ ಅವುಗಳು ನಿತ್ಯನೂತನವಾಗಿವೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಅಭಿಪ್ರಾಯಪಟ್ಟರು.</p>.<p>ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಪರಂಜ್ಯೊತಿ ಸಂಯೋಗ ಸೇವಾ ಮಂಟಪದಿಂದ ಶಾಂತಿನಗರದಲ್ಲಿ ನಡೆದ 16ನೇ ಮಾಸಿಕ ಶರಣ ಚಿಂತನಾ ಗೋಷ್ಠಿಯಲ್ಲಿ ‘ಬಸವಣ್ಣನವರ ಚಿಂತನೆಗಳು’ ವಿಷಯವಾಗಿ ಮಾತನಾಡಿದರು.</p>.<p>ಜಾತಿ, ಮತ, ಧರ್ಮ, ಪಂಗಡ ಮೀರಿದ ಬಸವೇಶ್ವರರ ಚಿಂತನೆಗಳು ಪ್ರಸ್ತುತ ವಿಶ್ವಮಾನ್ಯವಾಗಿವೆ. ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಶಿವಾನಂದ್, ‘ಬಸವಣ್ಣ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಬಸವಣ್ಣ ಕೇವಲ ಕರ್ನಾಟಕದ ಆಸ್ತಿಯಲ್ಲ. ರಾಜ್ಯ, ರಾಷ್ಟ್ರ ಮೀರಿ ಬೆಳೆದ ಅಂತರರಾಷ್ಟ್ರೀಯ ವ್ಯಕ್ತಿಯಾಗಿ ಜಗತ್ತಿನೆಲ್ಲೆಡೆ ಪೂಜಾರ್ಹರಾಗಿದ್ದಾರೆ’ ಎಂದು ನುಡಿದರು.</p>.<p>ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ಧರಾಮಯ್ಯ, ‘ವಿಶ್ವ ಸಂತರ ಸಾಲಿನಲ್ಲಿ ಶ್ರೇಷ್ಠರಾದ ಬಸವಣ್ಣ ಅವರು ಕನ್ನಡ ಭಾಷೆ ಶ್ರೀಮಂತಗೊಳಿಸಿದರು. ಅನುಭವ ಮಂಟಪ ಸ್ಥಾಪಿಸಿ ಸಾವಿರಾರು ಶರಣ, ಶರಣೆಯರನ್ನು ವಚನ ರಚನೆಗೆ ತೊಡಗಿಸಿದರು’ ಎಂದರು.</p>.<p>ಶರಣ ಸೇವೆಯಲ್ಲಿ ತೊಡಗಿರುವ ವಿ.ಎಸ್. ಪ್ರಭು ಅವರನ್ನು ಅಭಿನಂದಿಸಲಾಯಿತು. ರಾಜಶೇಖರಯ್ಯ ಈಚನೂರು ಸ್ವಾಗತಿಸಿದರು. ಮಹದೇವಮ್ಮ ಸಿದ್ಧರಾಮಯ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಬಸವಣ್ಣನವರ ವಚನಗಳಲ್ಲಿನ ಚಿಂತನೆಗಳು ಸರ್ವಸತ್ಯವಾಗಿವೆ. 900 ವರ್ಷಗಳು ಕಳೆದರೂ ಅವುಗಳು ನಿತ್ಯನೂತನವಾಗಿವೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಅಭಿಪ್ರಾಯಪಟ್ಟರು.</p>.<p>ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಪರಂಜ್ಯೊತಿ ಸಂಯೋಗ ಸೇವಾ ಮಂಟಪದಿಂದ ಶಾಂತಿನಗರದಲ್ಲಿ ನಡೆದ 16ನೇ ಮಾಸಿಕ ಶರಣ ಚಿಂತನಾ ಗೋಷ್ಠಿಯಲ್ಲಿ ‘ಬಸವಣ್ಣನವರ ಚಿಂತನೆಗಳು’ ವಿಷಯವಾಗಿ ಮಾತನಾಡಿದರು.</p>.<p>ಜಾತಿ, ಮತ, ಧರ್ಮ, ಪಂಗಡ ಮೀರಿದ ಬಸವೇಶ್ವರರ ಚಿಂತನೆಗಳು ಪ್ರಸ್ತುತ ವಿಶ್ವಮಾನ್ಯವಾಗಿವೆ. ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಮುಖಂಡ ಶಿವಾನಂದ್, ‘ಬಸವಣ್ಣ ಕೇವಲ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಬಸವಣ್ಣ ಕೇವಲ ಕರ್ನಾಟಕದ ಆಸ್ತಿಯಲ್ಲ. ರಾಜ್ಯ, ರಾಷ್ಟ್ರ ಮೀರಿ ಬೆಳೆದ ಅಂತರರಾಷ್ಟ್ರೀಯ ವ್ಯಕ್ತಿಯಾಗಿ ಜಗತ್ತಿನೆಲ್ಲೆಡೆ ಪೂಜಾರ್ಹರಾಗಿದ್ದಾರೆ’ ಎಂದು ನುಡಿದರು.</p>.<p>ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ಧರಾಮಯ್ಯ, ‘ವಿಶ್ವ ಸಂತರ ಸಾಲಿನಲ್ಲಿ ಶ್ರೇಷ್ಠರಾದ ಬಸವಣ್ಣ ಅವರು ಕನ್ನಡ ಭಾಷೆ ಶ್ರೀಮಂತಗೊಳಿಸಿದರು. ಅನುಭವ ಮಂಟಪ ಸ್ಥಾಪಿಸಿ ಸಾವಿರಾರು ಶರಣ, ಶರಣೆಯರನ್ನು ವಚನ ರಚನೆಗೆ ತೊಡಗಿಸಿದರು’ ಎಂದರು.</p>.<p>ಶರಣ ಸೇವೆಯಲ್ಲಿ ತೊಡಗಿರುವ ವಿ.ಎಸ್. ಪ್ರಭು ಅವರನ್ನು ಅಭಿನಂದಿಸಲಾಯಿತು. ರಾಜಶೇಖರಯ್ಯ ಈಚನೂರು ಸ್ವಾಗತಿಸಿದರು. ಮಹದೇವಮ್ಮ ಸಿದ್ಧರಾಮಯ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>