<p><strong>ವೈ.ಎನ್.ಹೊಸಕೋಟೆ:</strong> ಹೋಬಳಿ ಯಾದ್ಯಂತ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ನೀಡುತ್ತಿರುವ ಬಿತ್ತನೆ ಶೇಂಗಾ ಪರಿಶಿಷ್ಟರಿಗೆ ಸಿಗುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ ರೈತರು ಅರೋಪಿಸಿದ್ದಾರೆ.</p>.<p>ವಾರದಿಂದ ಶೇಂಗಾ ವಿತರಿಸಲಾಗುತ್ತಿದೆ. ಕೇವಲ 2–3 ದಿನ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಂಗಾ ವಿತರಿಸಿ ನಿಲ್ಲಿಸಿದ್ದಾರೆ. ಈ ಬಗ್ಗೆ ಕೇಳಿದರೆ ನಿಮ್ಮ ಕೋಟಾ ಮುಗಿದಿದೆ. ಸರ್ಕಾರ ಹೆಚ್ಚುವರಿ<br />ಕೋಟಾ ನೀಡಿದಲ್ಲಿ ನಿಮಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿ ವಿತರಣೆ ನಿಲ್ಲಿಸಿದ್ದಾರೆ. ಆದರೆ, ಸಾಮಾನ್ಯ ರೈತರಿಗೆ ನೀಡುತ್ತಿದ್ದಾರೆ ಎಂದು ವೈ.ಎನ್.ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಆರೋಪಿಸಿದರು.</p>.<p>‘ಹೋಬಳಿಯ ಎರಡು ವಿತರಣ ಕೇಂದ್ರಗಳಲ್ಲಿ ಒಟ್ಟು 244 ಕ್ವಿಂಟಲ್ ಬಿತ್ತನೆ ಬೀಜವನ್ನು ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರ ಮೀಸಲಿಟ್ಟಿತ್ತು. ಅದರಂತೆ ಈಗಾಗಲೇ ನಮ್ಮ ಕೇಂದ್ರದಿಂದ 162.04 ಕ್ವಿಂಟಲ್ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆಯಂತೆ ಮುಂದೆ ವಿತರಿಸಲಾಗುವುದು’ ಎಂದು ವೈ.ಎನ್.ಹೊಸಕೋಟೆ ವಿತರಣಾ ಕೇಂದ್ರದ ಅಧಿಕಾರಿ ಈರಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈ.ಎನ್.ಹೊಸಕೋಟೆ:</strong> ಹೋಬಳಿ ಯಾದ್ಯಂತ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ನೀಡುತ್ತಿರುವ ಬಿತ್ತನೆ ಶೇಂಗಾ ಪರಿಶಿಷ್ಟರಿಗೆ ಸಿಗುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ ರೈತರು ಅರೋಪಿಸಿದ್ದಾರೆ.</p>.<p>ವಾರದಿಂದ ಶೇಂಗಾ ವಿತರಿಸಲಾಗುತ್ತಿದೆ. ಕೇವಲ 2–3 ದಿನ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಂಗಾ ವಿತರಿಸಿ ನಿಲ್ಲಿಸಿದ್ದಾರೆ. ಈ ಬಗ್ಗೆ ಕೇಳಿದರೆ ನಿಮ್ಮ ಕೋಟಾ ಮುಗಿದಿದೆ. ಸರ್ಕಾರ ಹೆಚ್ಚುವರಿ<br />ಕೋಟಾ ನೀಡಿದಲ್ಲಿ ನಿಮಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿ ವಿತರಣೆ ನಿಲ್ಲಿಸಿದ್ದಾರೆ. ಆದರೆ, ಸಾಮಾನ್ಯ ರೈತರಿಗೆ ನೀಡುತ್ತಿದ್ದಾರೆ ಎಂದು ವೈ.ಎನ್.ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಆರೋಪಿಸಿದರು.</p>.<p>‘ಹೋಬಳಿಯ ಎರಡು ವಿತರಣ ಕೇಂದ್ರಗಳಲ್ಲಿ ಒಟ್ಟು 244 ಕ್ವಿಂಟಲ್ ಬಿತ್ತನೆ ಬೀಜವನ್ನು ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರ ಮೀಸಲಿಟ್ಟಿತ್ತು. ಅದರಂತೆ ಈಗಾಗಲೇ ನಮ್ಮ ಕೇಂದ್ರದಿಂದ 162.04 ಕ್ವಿಂಟಲ್ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆಯಂತೆ ಮುಂದೆ ವಿತರಿಸಲಾಗುವುದು’ ಎಂದು ವೈ.ಎನ್.ಹೊಸಕೋಟೆ ವಿತರಣಾ ಕೇಂದ್ರದ ಅಧಿಕಾರಿ ಈರಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>