ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಶಾಸಕ ಎಂ.ವಿ. ವೀರಭದ್ರಯ್ಯ

ಪಿಡಿಒಗಳಿಗೆ ಸೂಚನೆ
Last Updated 5 ಸೆಪ್ಟೆಂಬರ್ 2020, 7:43 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ‘ನರೇಗಾ ಕಾಮಗಾರಿ ಮಾಡಿಸುವಾಗ, ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡುವಾಗ ನಮ್ಮ (ಜೆಡಿಎಸ್‌) ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು’ ಎಂದು ಪಿಡಿಒಗಳಿಗೆ ಶಾಸಕ ಎಂ.ವಿ. ವೀರಭದ್ರಯ್ಯ ಸೂಚಿಸಿದರು.

ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕುಂದುಕೊರೆತೆ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ಪಚಾಯಿತಿಯಲ್ಲಿ ಸಾಮಾನ್ಯವರ್ಗದವರಿಗಾಗಿ 20 ಮನೆಗಳನ್ನು ವಸತಿ ಸಚಿವರನ್ನು ಕಾಡಿಬೇಡಿ ಮಂಜೂರು ಮಾಡಿಸುತ್ತೇನೆ. ಪಿಡಿಒಗಳು, ಆಡಳಿತಾಧಿಕಾರಿ ಯಾವುದೇ ರಾಜಕೀಯ ಮಾಡದೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಂತರ ಮೂರು ದಿನಗಳಲ್ಲಿ ನನಗೆ ಪತ್ರ ನೀಡಿದರೆ ಖಂಡಿತ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದರು

ಮಹಿಳೆಯೊಬ್ಬರು ಶಾಸಕರ ಬಳಿ ‘ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಮನೆ ಕೇಳಿದರೆ, ಅವರು ₹ 10 ಸಾವಿರ
ದುಡ್ಡು ಕೇಳುತ್ತಾರೆ’ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ‘ಈಗ ಅವರೆಲ್ಲ ಅಧಿಕಾರದಿಂದ ಇಳಿದು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಬೇಕಾದ ವ್ಯಕ್ತಿಗೆ ಮತ ನೀಡಿ ಗೆಲ್ಲಿಸಿಕೊಳ್ಳಿ’ ಎಂದರು.

ಕೃಷಿ ನಿರ್ದೇಶಕ ಡಿ. ಹನುಮಂತರಾಯಪ್ಪ, ಇಒ ದೊಡ್ಡಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಎಇಇ ಹೊನ್ನೇಶಪ್ಪ, ಪಿಡಿಒ ಕಾಂತರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ. ನರಸರೆಡ್ಡಿ, ಮುಖಂಡರಾದ ಕೆ.ಪಿ. ಅಕ್ರಂ, ಹನುಮಂತರಾಯಪ್ಪ, ನಾಸೀರ್ ಉದ್ದೀನ್, ಕೆ.ಪಿ.ಶಫಿವುಲ್ಲಾ, ಜಯರಾಮೇಗೌಡ, ನರಸಿಂಹರೆಡ್ಡಿ, ಜಬೀವುಲ್ಲಾ, ತರಕಾರಿರಾಜು, ಮೈಲಾರಿ, ಸೇಠುಗಂಗಾಧರ್, ರಾಜು, ಲಕ್ಷ್ಮಿನರಸಿಂಹಯ್ಯ, ಡಿಸ್ ಲಕ್ಷ್ಮಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT