‘ಕಣದಲ್ಲಿ ಮನೆಯ ಮಗ ಹಾಗೂ ಆಚೆ ಮನೆಯ ಮಗ ಇದ್ದಾರೆ. ಅವರಲ್ಲಿ ಯಾರು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಗಂಡಸರು ಹಾಗೂ ಗಂಡಸುತನ ಇದ್ದರೆ ಜಿಲ್ಲೆಯ ಅಭ್ಯರ್ಥಿಯನ್ನು ಗೆಲ್ಲಿಸಿ, ಹೊರಗಿನ ಅಭ್ಯರ್ಥಿಯನ್ನು ಸೋಲಿಸಬೇಕು. ಈಗ ನಿಮ್ಮ ಗಂಡಸುತನ ತೋರಿಸಬೇಕು’ ಎಂದು ಹೇಳುವ ಮೂಲಕ ಜಿಲ್ಲೆಯ ಜನರ ಸ್ವಾಭಿಮಾನ ಕೆಣಕಿದರು.