ಕುಣಿಗಲ್: ತಾಲ್ಲೂಕಿನ ಬೋರಲಿಂಗಯ್ಯಪಾಳ್ಯದ ಶೆಡ್ ಒಂದರಲ್ಲಿ ನಡೆಸಲಾಗುತ್ತಿದ್ದ ಅನಧಿಕೃತ ಗ್ಯಾಸ್ ರೀ ಫಿಲ್ಲಿಂಗ್ ಘಟಕದ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು 269 ಸಿಲಿಂಡರ್, ರೀ ಫಿಲ್ಲಿಂಗ್ ಸಾಮಾಗ್ರಿ ಮತ್ತು ವಾಹನ ವಶಪಡಿಸಿಕೊಂಡಿದ್ದಾರೆ.
ಕಸಬ ಹೋಬಳಿಯ ಬೋರಲಿಂಗಯ್ಯಪಾಳ್ಯದ ನೇರಳೆಮರದಮ್ಮ ದೇವಾಲಯದ ಸಮೀಪದ ಶೆಡ್ನಲ್ಲಿ ಬೋರಲಿಂಗಯ್ಯನ ಪಾಳ್ಯದ ಕುಮಾರ್ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಡಿವೈಎಸ್ಪಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಸಿಪಿಐ ಗುರುಪ್ರಸಾದ್ ಮತ್ತು ಸಿಬ್ಬಂದಿ ದಾಳಿ ನಡೆಸಿ 269 ಸಿಲಿಂಡರ್ ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕುಮಾರ್ ಪರಾರಿಯಾಗಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.