ಉತ್ತರಾರ್ಧದಲ್ಲಿ ಉತ್ತಮ ಹೋರಾಟ ಕಂಡುಬಂತು. ಆದರೆ ಮತ್ತೊಮ್ಮೆ ಕರ್ನಾಟಕ ಮುನ್ನಡೆಯಿತು. ನಿಹಾರ್ ಅವರ ಪಾಸ್ನಲ್ಲಿ 30 ಯಾರ್ಡ್ ದೂರದಿಂದ ನಿತಿನ್ ಪಾಲ್ ಎಡಗಾಲಿನಿಂದ ಒದ್ದ ಚೆಂಡು ಗೋಲಿನೊಳಕ್ಕೆ ಹೋಯಿತು. ಕರ್ನಾಟಕಕ್ಕೆ ಮತ್ತೆರಡು ಅವಕಾಶಗಳು ದೊರೆತರೂ (ಕ್ರಮವಾಗಿ ನಿತಿನ್ ಪಾಲ್, ಸೈಖೋಮ್ ಬೋರಿಸ್ ಸಿಂಗ್ ಅವರಿಗೆ) ದೆಹಲಿ ಗೋಲ್ಕೀಪರ್ ಮಕ್ಕರ್ ಅವರ ಉತ್ತಮ ತಡೆಗಳಿಂದ ಗೋಲು ತಪ್ಪಿದವು.