ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ದ್ಯಾಮಸಂದ್ರ ಗ್ರಾಮದ ಡಿ.ಎಸ್.ರಾಜಶೇಖರ್ ಅವರ ತೆಂಗಿನ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಯಿಂದಾಗಿ ಶಾರ್ಟ್ ಸರ್ಕೀಟ್ ಉಂಟಾಗಿ ತೆಂಗು, ಮಾವು, ಹುಣಸೆ ಮತ್ತು ತೇಗದ ಮರಗಳು ಸಂಪೂರ್ಣ ಸುಟ್ಟುಹೋಗಿವೆ.
ಇದ್ದಕ್ಕಿದ್ದ ಹಾಗೆ ಲೈನ್ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡು ತೆಂಗಿನ ಮರಗಳಿಗೆ ಆವರಿಸಿಕೊಂಡಿದೆ. ಫಲಬಿಡುವ 25 ತೆಂಗಿನ ಮರ, ಮೂರು ಮಾವು, ಮೂರು ಹುಣಸೆ ಮರ ಮತ್ತು ತೇಗದ ಮರಗಳು ಸಂಪೂರ್ಣ ಸುಟ್ಟುಹೋಗಿವೆ.
ದಂಡಿನಶಿವರ ಬೆಸ್ಕಾಂ ಶಾಖಾಧಿಕಾರಿ ಸೋಮಶೇಖರ್ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿದ್ಯುತ್ ಆವಘಡದಿಂದ ಉಂಟಾಗಿರುವ ನಷ್ಟವನ್ನು ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ರೈತ ಡಿ.ಎಸ್.ರಾಜಶೇಖರ್ ಮನವಿ ಮಾಡಿದ್ದಾರೆ.