<p><strong>ಪಾವಗಡ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ರಂಜಾನ್ ಹಬ್ಬವನ್ನು ಮುಸ್ಲಿಮರು ಭಕ್ತಿಯಿಂದ ಆಚರಿಸಿದರು.</p>.<p>ರಂಜಾನ್ ಪ್ರಯುಕ್ತ 28 ದಿನ ಉಪವಾಸವಿದ್ದು, 29ನೇ ದಿನ ಚಂದ್ರನ ದರ್ಶನ ಮಾಡಿ 30ನೇ ದಿನ ರಂಜಾನ್ ಆಚರಿಸಲಾಯಿತು.</p>.<p>ಪಟ್ಟಣದ ಪೆನುಗೊಂಡ ಊರುಬಾಗಿಲಿಂದ ಬೆಳಗ್ಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಿರಾ ರಸ್ತೆಯ ಈದ್ಗಾ ಮೈದಾನದಲ್ಲಿ ಸೇರಲಾಯಿತು. ಈದ್ಗಾ ಮೈದಾನದಲ್ಲಿ ನಮಾಜ್ ಪೂರೈಸಿ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಸಮುದಾಯ ಕೆಲವರು ಬಡ ಜನತೆಗೆ, ಅನಾಥರಿಗೆ ಹಣ, ದವಸ, ಧಾನ್ಯ ದಾನ ಮಾಡಿದರು.</p>.<p>ಇಮಾಮ್ ಪರೀದ್ಉಲ್ಲಾ ಮಾತನಾಡಿ, ದಾನ, ಉಪವಾಸದ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಹಬ್ಬದ ದಿನಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸದೆ ಪ್ರತಿನಿತ್ಯ ದೈನಂದಿನ ಚಟುವಟಿಕೆಗಳೊಂದಿಗೆ ಪ್ರಾರ್ಥನೆ ಮಾಡುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.</p>.<p>ತಾಲ್ಲೂಕಿನ ವೈ.ಎನ್ ಹೊಸಕೋಟೆಯಲ್ಲಿಯೂ ಶ್ರದ್ಧೆಯಿಂದ ರಂಜಾನ್ ಆಚರಿಸಲಾಯಿತು. ಗ್ರಾಮದ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.</p>.<p>ಯುನುಸ್, ರಫೀಕ್, ಬಾಬಾ, ಖಲೀಂ, ಸದ್ದಾಂ, ಅಜ್ಜು, ಸಲ್ಮಾನ್, ಅಂಜಾದ್, ಎಂಎಜಿ ಇಮ್ರಾನ್, ಜಾವಿದ್, ಸಮೀಉಲ್ಲಾ, ರಫೀಕ್ ಸಾಬ್, ಮೊಹಮ್ಮದ್ ಫಜಲುಲ್ಲಾ, ಅನ್ವರ್, ಬಾಬು, ತಮೀಜ್, ಕಲೀಮ್, ಮೊಹಮ್ಮದ್ ಇಮ್ರಾನ್, ರಿಯಾಜ್, ಆರ್.ಟಿ ಖಾನ್, ಆರ್.ಕೆ ನಿಸಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ರಂಜಾನ್ ಹಬ್ಬವನ್ನು ಮುಸ್ಲಿಮರು ಭಕ್ತಿಯಿಂದ ಆಚರಿಸಿದರು.</p>.<p>ರಂಜಾನ್ ಪ್ರಯುಕ್ತ 28 ದಿನ ಉಪವಾಸವಿದ್ದು, 29ನೇ ದಿನ ಚಂದ್ರನ ದರ್ಶನ ಮಾಡಿ 30ನೇ ದಿನ ರಂಜಾನ್ ಆಚರಿಸಲಾಯಿತು.</p>.<p>ಪಟ್ಟಣದ ಪೆನುಗೊಂಡ ಊರುಬಾಗಿಲಿಂದ ಬೆಳಗ್ಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಿರಾ ರಸ್ತೆಯ ಈದ್ಗಾ ಮೈದಾನದಲ್ಲಿ ಸೇರಲಾಯಿತು. ಈದ್ಗಾ ಮೈದಾನದಲ್ಲಿ ನಮಾಜ್ ಪೂರೈಸಿ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಸಮುದಾಯ ಕೆಲವರು ಬಡ ಜನತೆಗೆ, ಅನಾಥರಿಗೆ ಹಣ, ದವಸ, ಧಾನ್ಯ ದಾನ ಮಾಡಿದರು.</p>.<p>ಇಮಾಮ್ ಪರೀದ್ಉಲ್ಲಾ ಮಾತನಾಡಿ, ದಾನ, ಉಪವಾಸದ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಹಬ್ಬದ ದಿನಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸದೆ ಪ್ರತಿನಿತ್ಯ ದೈನಂದಿನ ಚಟುವಟಿಕೆಗಳೊಂದಿಗೆ ಪ್ರಾರ್ಥನೆ ಮಾಡುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.</p>.<p>ತಾಲ್ಲೂಕಿನ ವೈ.ಎನ್ ಹೊಸಕೋಟೆಯಲ್ಲಿಯೂ ಶ್ರದ್ಧೆಯಿಂದ ರಂಜಾನ್ ಆಚರಿಸಲಾಯಿತು. ಗ್ರಾಮದ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.</p>.<p>ಯುನುಸ್, ರಫೀಕ್, ಬಾಬಾ, ಖಲೀಂ, ಸದ್ದಾಂ, ಅಜ್ಜು, ಸಲ್ಮಾನ್, ಅಂಜಾದ್, ಎಂಎಜಿ ಇಮ್ರಾನ್, ಜಾವಿದ್, ಸಮೀಉಲ್ಲಾ, ರಫೀಕ್ ಸಾಬ್, ಮೊಹಮ್ಮದ್ ಫಜಲುಲ್ಲಾ, ಅನ್ವರ್, ಬಾಬು, ತಮೀಜ್, ಕಲೀಮ್, ಮೊಹಮ್ಮದ್ ಇಮ್ರಾನ್, ರಿಯಾಜ್, ಆರ್.ಟಿ ಖಾನ್, ಆರ್.ಕೆ ನಿಸಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>