ತಾಲ್ಲೂಕಿನ ಬಾಲಮ್ಮನಹಳ್ಳಿ ತಾಂಡದ ವೀಣಾಬಾಯಿ ಎಂಬುವವರು ಪಿಯು ಪರೀಕ್ಷೆ ಬರೆದಿದ್ದರು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿಶ್ವಾಸ ಹೊಂದಿದ್ದರು. ಆದರೆ 5 ವಿಷಯಗಳ ಅಂಕಗಳು 90ಕ್ಕೂ ಹೆಚ್ಚು ಬಂದಿವೆ, ಆದರೆ ಕನ್ನಡ ವಿಷಯದಲ್ಲಿ ಕೇವಲ 10 ಅಂಕ ಬಂದಿರುವುದಾಗಿ ಫಲಿತಾಂಶದಲ್ಲಿ ಪ್ರಕಟವಾಗಿತ್ತು. ಇದರಿಂದ ವಿದ್ಯಾರ್ಥಿನಿ ಆತಂಕಗೊಂಡಿದ್ದರು.