<p><strong>ಕೊರಟಗೆರೆ:</strong> ಬಿರುಗಾಳಿಯಿಂದಾಗಿ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ ಗ್ರಾಮದ ರೈತ ಜೋಗಪ್ಪ ಅವರ ಬಾಳೆ ತೋಟ ನಾಶವಾಗಿದೆ.</p>.<p>ಬಿರುಗಾಳಿ ರಭಸಕ್ಕೆ ಇಬ್ಬರು ರೈತರ ಮನೆಯ ಮೇಲಿನ ಶೀಟ್ಗಳು ಕೂಡ ಹಾರಿ ಹೋಗಿವೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ (ರಾಜಯ್ಯನಪಾಳ್ಯ) ಗ್ರಾಮದ ರೈತ ಜೋಗಪ್ಪ ಎಂಬುವರ 1 ಎಕರೆ 20 ಗುಂಟೆ ಬಾಳೆ ತೋಟದಲ್ಲಿ 600ಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿವೆ. ₹ 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ನಾಗಣ್ಣ ಎಂಬುವರ ಮನೆಯ 3 ಶೀಟ್ಗಳು ಗಾಳಿಗೆ ಹಾರಿಹೋಗಿವೆ.</p>.<p>ಕೈಸಾಲ ಮತ್ತು ಬ್ಯಾಂಕ್ಗಳಲ್ಲಿ ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿ 6 ತಿಂಗಳ ಹಿಂದೆ ಬಾಳೆ ಗಿಡ ನೆಟ್ಟಿದ್ದೆವು. ಮಳೆ ಮತ್ತು ಬಿರುಗಾಳಿಯಿಂದ ಫಸಲಿಗೆ ಬಂದಿದ್ದ ಬೆಳೆ ನಾಶವಾಗಿದೆ. 15ರಿಂದ 30 ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಿತ್ತು. ಆದರೀಗ ಬಿರುಗಾಳಿಯಿಂದ ನಾಶವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಜೋಗಪ್ಪ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊರಟಗೆರೆ:</strong> ಬಿರುಗಾಳಿಯಿಂದಾಗಿ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ ಗ್ರಾಮದ ರೈತ ಜೋಗಪ್ಪ ಅವರ ಬಾಳೆ ತೋಟ ನಾಶವಾಗಿದೆ.</p>.<p>ಬಿರುಗಾಳಿ ರಭಸಕ್ಕೆ ಇಬ್ಬರು ರೈತರ ಮನೆಯ ಮೇಲಿನ ಶೀಟ್ಗಳು ಕೂಡ ಹಾರಿ ಹೋಗಿವೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ (ರಾಜಯ್ಯನಪಾಳ್ಯ) ಗ್ರಾಮದ ರೈತ ಜೋಗಪ್ಪ ಎಂಬುವರ 1 ಎಕರೆ 20 ಗುಂಟೆ ಬಾಳೆ ತೋಟದಲ್ಲಿ 600ಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿವೆ. ₹ 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ನಾಗಣ್ಣ ಎಂಬುವರ ಮನೆಯ 3 ಶೀಟ್ಗಳು ಗಾಳಿಗೆ ಹಾರಿಹೋಗಿವೆ.</p>.<p>ಕೈಸಾಲ ಮತ್ತು ಬ್ಯಾಂಕ್ಗಳಲ್ಲಿ ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿ 6 ತಿಂಗಳ ಹಿಂದೆ ಬಾಳೆ ಗಿಡ ನೆಟ್ಟಿದ್ದೆವು. ಮಳೆ ಮತ್ತು ಬಿರುಗಾಳಿಯಿಂದ ಫಸಲಿಗೆ ಬಂದಿದ್ದ ಬೆಳೆ ನಾಶವಾಗಿದೆ. 15ರಿಂದ 30 ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಿತ್ತು. ಆದರೀಗ ಬಿರುಗಾಳಿಯಿಂದ ನಾಶವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಜೋಗಪ್ಪ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>