ಬೈರೇನಹಳ್ಳಿಯ ರೈತ ಲಕ್ಷ್ಮಣ್ ಪ್ರಸಾದ್, ನಂದೀಶ್, ಗಂಗಮ್ಮ ಅವರ ಮನೆ ಮತ್ತು 8ಕ್ಕೂ ಅಧಿಕ ಮಳಿಗೆ ಹಾಗೂ ಔಷಧಿ ಅಂಗಡಿಗೆ ನೀರು ನುಗ್ಗಿದೆ. ದಿನಸಿ ಸಾಮಗ್ರಿ, ದವಸ ಧಾನ್ಯ ನಾಶವಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಈಗ ಸಂಪರ್ಕವೇ ಕಡಿತಗೊಂಡಿದೆ.