ಬರಗೂರು, ಅಂಕಸಂದ್ರ, ಗೂಬೇಹಳ್ಳಿ ಹಳ್ಳಗಳ ಮೂಲಕ ಹುಳಿಯಾರು ಹೋಬಳಿಯ ಜೋಡಿ ತಿರುಮಲಾಪುರದ ಕೆರೆಗೆ ನೀರು ಹರಿದು ಬರುತ್ತಿದೆ. ಹೇಮಾವತಿ ನೀರು ತಿರುಮಲಾಪುರ ಕೆರೆಗೆ ತಲುಪಿರುವ ಸಂತೋಷ ಒಂದೆಡೆಯಾದರೆ, ಇತ್ತೀಚೆಗೆ ಈ ಭಾಗದಲ್ಲಿ ಉತ್ತಮ ಮಳೆಯಾಗಿರುವುದು ನೀರಿನ ಹರಿವು ಹೆಚ್ಚಾಗಲು ಕಾರಣ ಎನ್ನುತ್ತಾರೆ ಹಂದನಕೆರೆ ಹೋಬಳಿಯ ನಿರುವಗಲ್ ಗೊಲ್ಲರಹಟ್ಟಿಯ ನಿವಾಸಿ ಚನ್ನಪ್ಪ.