ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಜೆಸಿಬಿ, ಹಿಟಾಚಿ ವಾಹನಗಳ ಮುಖಾಂತರ ರಾಜ ಕಾಲುವೆಗಳಲ್ಲಿ ತುಂಬಿಕೊಂಡಿದ್ದ ತ್ಯಾಜ್ಯ ತೆರವುಗೊಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿನ ರಾಜ ಕಾಲುವೆಗಳ ಪರಿಸ್ಥಿತಿಯ ಬಗ್ಗೆ ಮೇ 18ರಂದು ‘ಕಾಲುವೆ ಒತ್ತುವರಿ ತೆರಿಗೆ ಇಚ್ಛಾಶಕ್ತಿ ಕೊರತೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ರಾಜ ಕಾಲುವೆ ಸ್ವಚ್ಛತೆ ಹಾಗೂ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.