ನಗರದ ಕೆ.ಆರ್.ಬಡಾವಣೆಯ ರಾಮದೇವರ ದೇಗುಲ, ಶೆಟ್ಟಿಹಳ್ಳಿಯ ಆಂಜನೇಯ ದೇವಸ್ಥಾನ, ಬಟವಾಡಿ ಆಂಜನೇಯ, ಬಿ.ಎಚ್.ರಸ್ತೆಯ ಆಂಜನೇಯ, ಕೋಟೆ ಆಂಜನೇಯ ಸ್ವಾಮಿ– ಹೀಗೆ ಹಲವು ದೇಗುಲಗಳಲ್ಲಿ ಬೆಳಿಗ್ಗೆಯೇ ವಿಶೇಷ ಪೂಜೆಗಳು ನೆರವೇರಿದವು. ದೇವರ ವಿಗ್ರಹಗಳಿಗೆ ಅಲಂಕಾರ ಮಾಡಲಾಗಿತ್ತು. ರಾಮ ಮತ್ತು ಆಂಜನೇಯ ದೇಗುಲಗಳಲ್ಲದೆ ಇತರೆ ದೇಗುಲಗಳಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.