<p><strong>ತುಮಕೂರು: </strong>ಚಿಕ್ಕನಾಯಕನಹಳ್ಳಿ ಪಟ್ಟಣದ ಕೈಮಗ್ಗ ನೇಕಾರ ರಮೇಶ್ ಅವರು ನೇಯ್ಗೆ ಮಾಡಿರುವ ರತ್ನಗಂಬಳಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.</p>.<p>ಕೈಮಗ್ಗ ನೇಕಾರರ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡುವ ಸಲುವಾಗಿ ಉಣ್ಣೆ ಕ್ಷೇತ್ರದಲ್ಲಿ ರಮೇಶ್ ಅವರು ಹೊಂದಿರುವ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ ಹಾಗೂಉತ್ಕೃಷ್ಟತೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.</p>.<p>ಪ್ರಶಸ್ತಿಯು ₹15 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಆ. 7ರಂದು ವಿಕಾಸಸೌಧ, ಕೊಠಡಿ ಸಂಖ್ಯೆ 419ರ ಸಭಾಂಗಣದಲ್ಲಿ ನಡೆಯಲಿರುವ 7ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೈಮಗ್ಗ ಜವಳಿ ಇಲಾಖೆ ಉಪನಿರ್ದೇಶಕಿ ಡಿ.ಸುಮಲತಾ ತಿಳಿಸಿದ್ದಾರೆ.</p>.<p>ರಮೇಶ್ ಅವರು ಉತ್ಪಾದಿಸಿದ ಅಪ್ಪಟ ರತ್ನಗಂಬಳಿಯು 6X4 ಅಡಿ ಅಳತೆ, ಸುಮಾರು 7 ಕೆ.ಜಿ ತೂಕ ಹೊಂದಿದ್ದು, ಇದರ ಬೆಲೆ ₹ 5 ಸಾವಿರ. ಈ ರತ್ನಗಂಬಳಿಯನ್ನು ನೆಲಹಾಸಾಗಿ ಉಪಯೋಗಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಚಿಕ್ಕನಾಯಕನಹಳ್ಳಿ ಪಟ್ಟಣದ ಕೈಮಗ್ಗ ನೇಕಾರ ರಮೇಶ್ ಅವರು ನೇಯ್ಗೆ ಮಾಡಿರುವ ರತ್ನಗಂಬಳಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.</p>.<p>ಕೈಮಗ್ಗ ನೇಕಾರರ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡುವ ಸಲುವಾಗಿ ಉಣ್ಣೆ ಕ್ಷೇತ್ರದಲ್ಲಿ ರಮೇಶ್ ಅವರು ಹೊಂದಿರುವ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ ಹಾಗೂಉತ್ಕೃಷ್ಟತೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.</p>.<p>ಪ್ರಶಸ್ತಿಯು ₹15 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಆ. 7ರಂದು ವಿಕಾಸಸೌಧ, ಕೊಠಡಿ ಸಂಖ್ಯೆ 419ರ ಸಭಾಂಗಣದಲ್ಲಿ ನಡೆಯಲಿರುವ 7ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೈಮಗ್ಗ ಜವಳಿ ಇಲಾಖೆ ಉಪನಿರ್ದೇಶಕಿ ಡಿ.ಸುಮಲತಾ ತಿಳಿಸಿದ್ದಾರೆ.</p>.<p>ರಮೇಶ್ ಅವರು ಉತ್ಪಾದಿಸಿದ ಅಪ್ಪಟ ರತ್ನಗಂಬಳಿಯು 6X4 ಅಡಿ ಅಳತೆ, ಸುಮಾರು 7 ಕೆ.ಜಿ ತೂಕ ಹೊಂದಿದ್ದು, ಇದರ ಬೆಲೆ ₹ 5 ಸಾವಿರ. ಈ ರತ್ನಗಂಬಳಿಯನ್ನು ನೆಲಹಾಸಾಗಿ ಉಪಯೋಗಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>