<p><strong>ತಿಪಟೂರು:</strong> ತಿಪಟೂರು ಉಪವಿಭಾಗದ ಪೊಲೀಸರು ಎರಡು ಕೊಲೆ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ದುಷ್ಕರ್ಮಿಗಳು ನಗರದ ಮೋರ್ ಮುಂಭಾಗದಲ್ಲಿ ಮೇ 21ರಂದು ವ್ಯಕ್ತಿಯನ್ನು ಕೊಲೆಮಾಡಿ ಸಿಮೆಂಟ್ ಚೀಲದಲ್ಲಿ ಹಾಕಿ ಚರಂಡಿಗೆ ಬಿಸಾಡಿ ಹೋಗಿದ್ದರು. ಕೊಲೆಯಾದ 17 ದಿನಗಳ ನಂತರ ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ<br />ನೀಡಿದ್ದರು.</p>.<p>ತನಿಖೆಯ ನಂತರ ವ್ಯಕ್ತಿಯನ್ನು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಹೊಳಲಕೆರೆ ಕುಮಾರ (49) ಎಂದು ಗುರುತಿಸಲಾಗಿತ್ತು. ಜೂಜಾಟದಲ್ಲಿ ಉಂಟಾದ ಜಗಳದಿಂದಾಗಿ ಆತನ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದ 6 ಮಂದಿ ಈತನ ಕೊಲೆ ಮಾಡಿದ್ದರು. ಕೊಲೆ ಆರೋಪಿಗಳಾದ ಸುಬ್ರಮಣ್ಯ, ವೆಂಕಟೇಶ್, ಕುಳ್ಳ ಮಂಜುನಾಥ್ ಎಂಬುವರನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.</p>.<p class="Subhead">ಗಂಡನೇ ಕೊಲೆಗಾರ: ತಾಲ್ಲೂಕಿನನೊಣವಿನಕೆರೆ ಸಮೀಪ ಕನ್ನೂಘಟ್ಟದ ಅಶ್ವಿನಿ ಎಂಬುವರು ಫೆ. 11ರಂದು ಬಾವಿಗೆ ಬಿದ್ದು ಮೃತಪಟ್ಟಿದ್ದರು. ತನ್ನ ತಂಗಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಅಕ್ಕ ನೊಣವಿನಕೆರೆ ಠಾಣೆಯಲ್ಲಿ ದೂರು<br />ನೀಡಿದ್ದರು.</p>.<p>ತನಿಖೆ ಕೈಗೆತ್ತಿಕೊಂಡ ಪೊಲೀಸರು ಗಂಡ ರಘುನಂದನನ್ನು ವಿಚಾರಣೆಗೆ ಒಳಪಡಿಸಿದಾಗ ‘ತಾನು ಮತ್ತು ತನ್ನ ತಾಯಿ ಸೇರಿಕೊಂಡು ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕನ್ನೂಘಟ್ಟದ ತಿಮ್ಮೇಗೌಡರ ತೋಟದ ಬಾವಿಗೆ ಹಾಕಿರುವುದಾಗಿ’ ಒಪ್ಪಿಕೊಂಡಿದ್ದಾನೆ.</p>.<p>ಗಂಡ ರಘುನಂದನ್, ತಾಯಿ ಭಾಗ್ಯಮ್ಮ, ತಂದೆ ಮಂಜುನಾಥ್, ಅಣ್ಣ ಮಹಲಿಂಗಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ತಿಪಟೂರು ಉಪವಿಭಾಗದ ಪೊಲೀಸರು ಎರಡು ಕೊಲೆ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ದುಷ್ಕರ್ಮಿಗಳು ನಗರದ ಮೋರ್ ಮುಂಭಾಗದಲ್ಲಿ ಮೇ 21ರಂದು ವ್ಯಕ್ತಿಯನ್ನು ಕೊಲೆಮಾಡಿ ಸಿಮೆಂಟ್ ಚೀಲದಲ್ಲಿ ಹಾಕಿ ಚರಂಡಿಗೆ ಬಿಸಾಡಿ ಹೋಗಿದ್ದರು. ಕೊಲೆಯಾದ 17 ದಿನಗಳ ನಂತರ ವಾಸನೆ ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ<br />ನೀಡಿದ್ದರು.</p>.<p>ತನಿಖೆಯ ನಂತರ ವ್ಯಕ್ತಿಯನ್ನು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಹೊಳಲಕೆರೆ ಕುಮಾರ (49) ಎಂದು ಗುರುತಿಸಲಾಗಿತ್ತು. ಜೂಜಾಟದಲ್ಲಿ ಉಂಟಾದ ಜಗಳದಿಂದಾಗಿ ಆತನ ಜತೆಗೆ ಕೂಲಿ ಕೆಲಸ ಮಾಡುತ್ತಿದ್ದ 6 ಮಂದಿ ಈತನ ಕೊಲೆ ಮಾಡಿದ್ದರು. ಕೊಲೆ ಆರೋಪಿಗಳಾದ ಸುಬ್ರಮಣ್ಯ, ವೆಂಕಟೇಶ್, ಕುಳ್ಳ ಮಂಜುನಾಥ್ ಎಂಬುವರನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.</p>.<p class="Subhead">ಗಂಡನೇ ಕೊಲೆಗಾರ: ತಾಲ್ಲೂಕಿನನೊಣವಿನಕೆರೆ ಸಮೀಪ ಕನ್ನೂಘಟ್ಟದ ಅಶ್ವಿನಿ ಎಂಬುವರು ಫೆ. 11ರಂದು ಬಾವಿಗೆ ಬಿದ್ದು ಮೃತಪಟ್ಟಿದ್ದರು. ತನ್ನ ತಂಗಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಅಕ್ಕ ನೊಣವಿನಕೆರೆ ಠಾಣೆಯಲ್ಲಿ ದೂರು<br />ನೀಡಿದ್ದರು.</p>.<p>ತನಿಖೆ ಕೈಗೆತ್ತಿಕೊಂಡ ಪೊಲೀಸರು ಗಂಡ ರಘುನಂದನನ್ನು ವಿಚಾರಣೆಗೆ ಒಳಪಡಿಸಿದಾಗ ‘ತಾನು ಮತ್ತು ತನ್ನ ತಾಯಿ ಸೇರಿಕೊಂಡು ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಕನ್ನೂಘಟ್ಟದ ತಿಮ್ಮೇಗೌಡರ ತೋಟದ ಬಾವಿಗೆ ಹಾಕಿರುವುದಾಗಿ’ ಒಪ್ಪಿಕೊಂಡಿದ್ದಾನೆ.</p>.<p>ಗಂಡ ರಘುನಂದನ್, ತಾಯಿ ಭಾಗ್ಯಮ್ಮ, ತಂದೆ ಮಂಜುನಾಥ್, ಅಣ್ಣ ಮಹಲಿಂಗಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>