<p><strong>ತುಮಕೂರು:</strong> ‘ಸಮಾಜ ಎರಡು ಚಕ್ರಗಳ ರಥವಿದ್ದಂತೆ, ಒಂದು ಚಕ್ರ ಆರ್ಥಿಕ ಅಭಿವೃದ್ಧಿ ಸೂಚಿಸಿದರೆ ಇನ್ನೊಂದು ಚಕ್ರ ಪರಿಸರ ಅಭಿವೃದ್ಧಿಯನ್ನು ಹೇಳುತ್ತದೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಎಂ.ಕೆ.ರಮೇಶ್ ನುಡಿದರು.</p>.<p>ವಿದ್ಯೋದಯ ಕಾಲೇಜಿನಲ್ಲಿ ಸಿಜ್ಞಾ ಯುವ ಸಂವಾದ ಕೇಂದ್ರದ ಸಹಯೋಗದಲ್ಲಿ ನಡೆದ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಕಾನೂನು ಮತ್ತು ಸರ್ಕಾರದ ನೀತಿಗಳ ಪಾತ್ರ ಸಂವಾದ ಉದ್ಘಾಟಿಸಿ ಮಾತನಾಡಿದರು.</p>.<p>ರಥ ಚಲಿಸಲು ಎರಡು ಚಕ್ರಗಳು ಎಷ್ಟು ಮುಖ್ಯವೋ ಹಾಗೆಯೇ ಸಮಾಜ ಮುಂದಕ್ಕೆ ಹೋಗಲು ಪರಿಸರ ಮತ್ತು ಆರ್ಥಿಕತೆಯ ಸಮಾನ ಬೆಳವಣಿಗೆ ಅಗತ್ಯ ಎಂದರು.</p>.<p>ಸರ್ಕಾರಗಳು ಎಲ್ಲ ಕಾಲಕ್ಕೆ ಸಲ್ಲುವ ಸುಸ್ಥಿರ ಅಭಿವೃದ್ಧಿ ಕಡೆಗೆ ಮುಖ ಮಾಡಬೇಕು. ಇದರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಇನ್ನೊಬ್ಬರ ಅವಶ್ಯಕತೆಗಳನ್ನು ಕಿತ್ತುಕೊಂಡು ಬದುಕುವುದೇ ಕೆಲಸವಾಗಬಾರದು. ಸಾಮಾಜಿಕ ಹಿತವನ್ನು ಕಾಪಾಡಲು ಕಾನೂನು ಅವಶ್ಯ ಎಂದು ಹೇಳಿದರು.</p>.<p>ಇಂದು ಎಲ್ಲ ಸರಕಾರಗಳು ರೈತರನ್ನು ವ್ಯವಸ್ಥಿತವಾಗಿ ಕೊಲೆ ಮಾಡುತ್ತಿವೆ. ಜಾಗತಿಕ ಆರ್ಥಿಕತೆ ಕೆಲವೇ ಕೆಲವರು ಹಿಡಿತದಲ್ಲಿ ಇದೆ. ಭೂಮಿತ ಸುಸ್ಥಿರತೆ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಭಾರತ ನಗರಗಳ ಭಾರಕ್ಕೆ ಕುಸಿಯುತ್ತಿದೆ. ನಗರಗಳು ಮಲಿನಗೊಂಡು ಬದುಕಲು ಯೋಗ್ಯವಲ್ಲದ ಜಾಗಗಳಾಗಿ ಬದಲಾಗುತ್ತಿವೆ ಎಂದು ಸಿಜ್ಞಾ ಯುವ ಕೇಂದ್ರದ ನಿರ್ದೇಶಕ ಜ್ಞಾನ ಸಿಂಧೂ ಸ್ವಾಮಿ ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ವಿದ್ಯೋದಯ ಫೌಂಡೇಶನ್ ಟ್ರಸ್ಟಿಗಳಾದ ಎಚ್.ಎಸ್.ಶೇಷಾದ್ರಿ, ಪ್ರಾಂಶುಪಾಲರಾದ ಪ್ರೊ.ವೆಂಕಟಾಚಲಪತಿ ಸ್ವಾಮಿ ಮಾತನಾಡಿದರು.</p>.<p>ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಮಂಜುಳಾ, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ‘ಸಮಾಜ ಎರಡು ಚಕ್ರಗಳ ರಥವಿದ್ದಂತೆ, ಒಂದು ಚಕ್ರ ಆರ್ಥಿಕ ಅಭಿವೃದ್ಧಿ ಸೂಚಿಸಿದರೆ ಇನ್ನೊಂದು ಚಕ್ರ ಪರಿಸರ ಅಭಿವೃದ್ಧಿಯನ್ನು ಹೇಳುತ್ತದೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಎಂ.ಕೆ.ರಮೇಶ್ ನುಡಿದರು.</p>.<p>ವಿದ್ಯೋದಯ ಕಾಲೇಜಿನಲ್ಲಿ ಸಿಜ್ಞಾ ಯುವ ಸಂವಾದ ಕೇಂದ್ರದ ಸಹಯೋಗದಲ್ಲಿ ನಡೆದ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಕಾನೂನು ಮತ್ತು ಸರ್ಕಾರದ ನೀತಿಗಳ ಪಾತ್ರ ಸಂವಾದ ಉದ್ಘಾಟಿಸಿ ಮಾತನಾಡಿದರು.</p>.<p>ರಥ ಚಲಿಸಲು ಎರಡು ಚಕ್ರಗಳು ಎಷ್ಟು ಮುಖ್ಯವೋ ಹಾಗೆಯೇ ಸಮಾಜ ಮುಂದಕ್ಕೆ ಹೋಗಲು ಪರಿಸರ ಮತ್ತು ಆರ್ಥಿಕತೆಯ ಸಮಾನ ಬೆಳವಣಿಗೆ ಅಗತ್ಯ ಎಂದರು.</p>.<p>ಸರ್ಕಾರಗಳು ಎಲ್ಲ ಕಾಲಕ್ಕೆ ಸಲ್ಲುವ ಸುಸ್ಥಿರ ಅಭಿವೃದ್ಧಿ ಕಡೆಗೆ ಮುಖ ಮಾಡಬೇಕು. ಇದರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಇನ್ನೊಬ್ಬರ ಅವಶ್ಯಕತೆಗಳನ್ನು ಕಿತ್ತುಕೊಂಡು ಬದುಕುವುದೇ ಕೆಲಸವಾಗಬಾರದು. ಸಾಮಾಜಿಕ ಹಿತವನ್ನು ಕಾಪಾಡಲು ಕಾನೂನು ಅವಶ್ಯ ಎಂದು ಹೇಳಿದರು.</p>.<p>ಇಂದು ಎಲ್ಲ ಸರಕಾರಗಳು ರೈತರನ್ನು ವ್ಯವಸ್ಥಿತವಾಗಿ ಕೊಲೆ ಮಾಡುತ್ತಿವೆ. ಜಾಗತಿಕ ಆರ್ಥಿಕತೆ ಕೆಲವೇ ಕೆಲವರು ಹಿಡಿತದಲ್ಲಿ ಇದೆ. ಭೂಮಿತ ಸುಸ್ಥಿರತೆ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಭಾರತ ನಗರಗಳ ಭಾರಕ್ಕೆ ಕುಸಿಯುತ್ತಿದೆ. ನಗರಗಳು ಮಲಿನಗೊಂಡು ಬದುಕಲು ಯೋಗ್ಯವಲ್ಲದ ಜಾಗಗಳಾಗಿ ಬದಲಾಗುತ್ತಿವೆ ಎಂದು ಸಿಜ್ಞಾ ಯುವ ಕೇಂದ್ರದ ನಿರ್ದೇಶಕ ಜ್ಞಾನ ಸಿಂಧೂ ಸ್ವಾಮಿ ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ವಿದ್ಯೋದಯ ಫೌಂಡೇಶನ್ ಟ್ರಸ್ಟಿಗಳಾದ ಎಚ್.ಎಸ್.ಶೇಷಾದ್ರಿ, ಪ್ರಾಂಶುಪಾಲರಾದ ಪ್ರೊ.ವೆಂಕಟಾಚಲಪತಿ ಸ್ವಾಮಿ ಮಾತನಾಡಿದರು.</p>.<p>ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಮಂಜುಳಾ, ಮಂಜುನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>