ಕಾಂಗ್ರೆಸ್, ಕಮ್ಯುನಿಷ್ಟ್, ಎಸ್ಎಫ್ಐ ಮತ್ತಿತರರು ದೇಶದ್ರೋಹಿ ಕೆಲಸ ಮಾಡಲು ಆರಂಭಿಸಿದ್ದಾರೆ. ಇವರ ಮಾತನ್ನು ನಾಗರಿಕರು ಕೇಳಬಾರದು, ನಮ್ಮ ದೇಶದ ಮುಸ್ಲಿಂ ಬಂಧುಗಳಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ, ಮುಸ್ಲಿಂ ಜನರು ಕಾಂಗ್ರೆಸ್ ಹಾಗೂ ಕಮ್ಯುನಿಷ್ಟ್ಗಳ ಜತೆಗಿದ್ದರೆ ಮುಂದಿನ ದಿನದಲ್ಲಿ ದೇಶಕ್ಕೆ ಗಂಡಾಂತರ ಬರಲಿದೆ. ಕೂಡಲೇ ಎಚ್ಚೆತ್ತುಕೊಂಡು ಸಹಿಷ್ಣುತೆಯಿಂದ ಬಾಳಬೇಕು ಎಂದರು.