ರಾಜ್ಯದಲ್ಲಿ ಈ ಬಾರಿ 8.59 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 6.31 ಲಕ್ಷ ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶ ಹೆಚ್ಚಿಸಲು ಶೇ 20 ರಷ್ಟು ಕೃಪಾಂಕ ನೀಡಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಲೋಪವಾದರೆ ಕೃಪಾಂಕ ನೀಡಬೇಕು. ಅದನ್ನು ಬಿಟ್ಟು ಫಲಿತಾಂಶ ಹೆಚ್ಚಿಸಲು ನೀಡಿರುವುದು ನಾಚಿಕೆಗೇಡು. ಕೃಪಾಂಕ ನೀಡಿರುವುದರಿಂದ 1.69 ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ. ಇಲ್ಲದಿದ್ದರೆ ಫಲಿತಾಂಶ ಶೇ 53ಕ್ಕೆ ಕುಸಿಯುತ್ತಿತ್ತು ಎಂದರು.