‘ಆಮರಣಾಂತ ಉಪವಾಸ ಮಾಡಿದರೆ ಮೂತ್ರ ಪರೀಕ್ಷೆ ಮಾಡಿಸುತ್ತೇನೆ ಎಂದು ಸಿ.ಸಿ.ಪಾಟೀಲ್ ಸಭೆಯಲ್ಲಿ ಹೇಳಿದರು. ಸರ್ಕಾರದ ಪರವಾದ ಸಚಿವರಾಗಿ ಸಭೆಯಲ್ಲಿ ಮಾತನಾಡಿದ ರೀತಿ ಸರಿ ಇರಲಿಲ್ಲ. ನಮ್ಮನ್ನು ಪರೀಕ್ಷೆ ಮಾಡಲಿ, ಪೂಜ್ಯರ ಮೂತ್ರವನ್ನೂ ಪರೀಕ್ಷೆ ಮಾಡಲಿ. ಮುಂದೆ ಸಮಾಜದವರೇ ಅವರ ಮೂತ್ರ ಪರೀಕ್ಷಿಸುವರು. ಆ ಕಾಲ ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.