ಶಾಸಕ ಡಾ. ರಂಗನಾಥ್ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ನಾಲೆಗಳ ಅಭಿವೃದ್ಧಿಗೆ ₹9 ಕೋಟಿ ಬಿಡುಗಡೆ ಮಾಡಿದ ಕಾರಣ ನಾಲೆ ಸ್ವಚ್ಛಗೊಳಿಸಲಾಗಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿದು ದಾಖಲೆಯಾಗಿದೆ. ವಿತರಣಾ ನಾಲೆ 26ರಲ್ಲಿ ನೀರು ಹರಿದ ಪರಿಣಾಮ ಯಡೆಯೂರು ಹೋಬಳಿಯ 14 ಕೆರೆಗಳಿಗೆ ನೀರು ಬಂದಿದೆ ಎಂದರು.