ದೀಪಾವಳಿ ಅಮಾವಾಸ್ಯೆಯಂದು ಬೆಲಗೂರು ಅವಧೂತರು ನೀಡಿರುವ ಅಭಯಾಂಜನೇಯ ಸ್ವಾಮಿಗೆ ವಾಯು
ಸ್ತುತಿ ಪುನಶ್ಚರಣ ಮಧುಪರ್ಕ ಅಭಿಷೇಕ ಹಾಗೂ ಅಕ್ಷಯ ಮಹಾಲಕ್ಷ್ಮಿ ಅಮ್ಮನವರಿಗೆ 108 ಕಮಲ ಪುಷ್ಪಗಳ ಸಮರ್ಪಣೆ ಹಾಗೂ ಕುಂಕುಮಾರ್ಚನೆ ನಡೆಯಿತು.ಬಲಿಪಾಡ್ಯಮಿಯಂದು ಉತ್ಸವ ಮೂರ್ತಿಗೆ ಕರಾವಳಿ ಶೈಲಿಯ ನೂತನ ಅಟ್ಟೆ ಪ್ರಭಾವಳಿ ಹಾಗೂ ರಜತ ಕವಚ ಸಮರ್ಪಣೆ ಮಹೋತ್ಸವ ಹಾಗೂ ಪಂಜು ಛತ್ರಿ ವಾದ್ಯ ವೈಭವದೊಂದಿಗೆ ನೂತನ ಅಟ್ಟೆ ಪ್ರಭಾವಳಿ ಮತ್ತು ರಜತ ಕವಚಾಲಂಕೃತ ಮಹಾದೇವಿಯ ಸರಳ ರಾಜಬೀದಿ ಉತ್ಸವ ನಡೆಯಿತು. ಈ ವೇಳೆ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.