2013 ಅಕ್ಟೋಬರ್ನಿಂದ 2024 ಮಾರ್ಚ್ ವರೆಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಿ ಹಾಸ್ಟೆಲ್ಗಳಿಗೆ ಸರಬರಾಜು ಮಾಡುವಲ್ಲಿ ಅಧಿಕಾರಿ ಲೋಪವೆಸಗಿದ್ದಾರೆ. ಸಿದ್ಧಗಂಗಾ ಮಠದಿಂದ ನಿಯಮ ಬಾಹಿರವಾಗಿ ಅಕ್ಕಿ ಸಾಲ ತಂದಿರುವುದು ಖಚಿತಪಟ್ಟಿದೆ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ. ‘ಅಕ್ಕಿ ಕೊರತೆ, ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ’ ಸುದ್ದಿ ಫೆ. 19ರಂದು ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟವಾಗಿತ್ತು.