



ನಾಗರಿಕತೆ ಬೆಳೆದಂತೆ ರಸ್ತೆಗಳ ಗುಣಮಟ್ಟ ಉತ್ತಮವಾಗಬೇಕು. ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾರುದ್ದದ ಗುಂಡಿಗಳು ಸವಾರರನ್ನು ದಿಗ್ಭ್ರಾಂತಗೊಳಿಸುತ್ತಿವೆ. ಇದರಲ್ಲಿ ಜನರ ಜವಾಬ್ದಾರಿಯೂ ಇದೆ. ರಸ್ತೆ ಕಾಮಗಾರಿ ನಡೆಯುವಾಗ ಅಧಿಕಾರಿಗಳೊಂದಿಗೆ ಜನರು ಸಹ ಗುಣಮಟ್ಟ ಪರಿಶೀಲಿಸಬೇಕು.ಅನುಷ್ ಶಿವಯ್ಯ ಶಾಸಕರು
ತಿಪಟೂರು ಮಹಿಳಾ ಕ್ಷೇತ್ರ ಆಗುತ್ತದೆ ಎಂಬ ಉದಾಸೀನತೆಯಿಂದ ಎರಡು ವರ್ಷಗಳಿಂದ ರಸ್ತೆ ಕಾಮಗಾರಿಯನ್ನು ಮರೆತು ಹೋಗಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ದಿಲೀಪ್ ಸೂಗೂರು ಬಿಜೆಪಿ ಮುಖಂಡ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅನೇಕ ರಸ್ತೆಗಳು ಜಲ್ಲಿ ಮತ್ತು ಡಾಂಬರು ಕಂಡಿಲ್ಲ. ಗುಂಡಿಮಯವಾಗಿದ್ದು ವಾಹನ ಸವಾರರು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದ್ದರೂ ಕೆಲಸದ ಗುಣಮಟ್ಟ ಹಾಗೂ ಮೇಲ್ವಿಚಾರಣೆ ಕೊರತೆಯಿಂದ ಶಾಶ್ವತ ಪರಿಹಾರ ದೊರೆಯುತ್ತಿಲ್ಲ.ರೇಣು ಡಿ.ಸಿ. ನಗರ ನಿವಾಸಿ
ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ನೀಡಲು ತಕ್ಷಣ ದುರಸ್ತಿ ಪ್ರಾರಂಭಿಸಿ. ಪ್ರತಿ ಇಲಾಖೆಯೂ ತನ್ನ ವ್ಯಾಪ್ತಿಯ ರಸ್ತೆಗಳ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಗುಂಡಿ ಅಭಿಯಾನ ಮಾಡಬೇಕಾಗುತ್ತದೆ.ಸುದರ್ಶನ್ ಜೆಡಿಎಸ್ ನಗರಾಧ್ಯಕ್ಷ
ಪ್ರತಿ ವರ್ಷ ರಸ್ತೆ ಕಾಮಗಾರಿಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆದರೆ ಕೆಲವೇ ತಿಂಗಳಲ್ಲಿ ರಸ್ತೆ ಮತ್ತೆ ಕುಸಿಯುತ್ತದೆ. ಕೆಲಸದ ಗುಣಮಟ್ಟದ ಮೇಲಿನ ನಿಗಾ ಕೊರತೆ ಇದೆ. ಸ್ಥಳೀಯ ಸಂಸ್ಥೆಗಳು ರಸ್ತೆ ಕಾಮಗಾರಿಗಳನ್ನು ಗುಣಮಟ್ಟದ ನಿಯಮಾವಳಿಗಳ ಪ್ರಕಾರ ನಿರ್ವಹಿಸಬೇಕು. ಮಳೆಗಾಲದ ಮೊದಲು ದುರಸ್ತಿ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರು ಸ್ವೀಕರಿಸಲು ಆನ್ಲೈನ್ ವ್ಯವಸ್ಥೆ ಅಥವಾ ನೇರ ಸಂಪರ್ಕ ಕಚೇರಿ ಸ್ಥಾಪಿಸಬೇಕು.ಚಂದ್ರಶೇಖರ್ ಬಿಳಿಗೆರೆ
ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದಾಗ ಚಾಲಕರು ವಾಹನಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ. ಸಂಬಂಧಪಟ್ಟ ರಸ್ತೆಗಳ ಇಲಾಖೆಗಳನ್ನು ಗುರುತಿಸಿ ದೂರು ದಾಖಲಿಸಿದಾಗ ಇಲಾಖೆಯವರು ಎಚ್ಚೆತ್ತು ಕಾರ್ಯಪ್ರವೃತ್ತರಾಗುತ್ತಾರೆ.ಲತಾ ಸುಂದರ್ ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.