ಕಳೆದ ಒಂಬತ್ತು ತಿಂಗಳಿಂದ ಪ್ಯಾಸೆಂಜರ್ ಹಾಗೂ ಸಾಮಾನ್ಯ ರೈಲುಗಳು ಸಂಚರಿಸದೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದುಬಾರಿ ಹಣಕೊಟ್ಟು ಬಸ್ಗಳಲ್ಲಿ ಜನರು ಓಡಾಡುವಂತಾಗಿದೆ. ಇದರಿಂದ ದಿನನಿತ್ಯ ಬೆಂಗಳೂರಿಗೆ ಹೋಗಿ ಬರುವವರು, ವ್ಯಾಪಾಸ್ಥರು, ರೈತರು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ ಎಂದು ತಿಳಿಸಿದ್ದಾರೆ.