ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ತುಮಕೂರು: ಸ್ಮಶಾನಕ್ಕಿಲ್ಲ ಜಾಗ; ಕೆರೆಯಂಗಳದಲ್ಲೇ ಅಂತ್ಯಕ್ರಿಯೆ

Published : 16 ಏಪ್ರಿಲ್ 2025, 7:20 IST
Last Updated : 16 ಏಪ್ರಿಲ್ 2025, 7:20 IST
ಫಾಲೋ ಮಾಡಿ
Comments
ಸತ್ಯಮಂಗಲ ಮುಖ್ಯರಸ್ತೆ ಹಾಳಾಗಿರುವುದು
ಸತ್ಯಮಂಗಲ ಮುಖ್ಯರಸ್ತೆ ಹಾಳಾಗಿರುವುದು
ಸತ್ಯಮಂಗಲ ಮುಖ್ಯರಸ್ತೆಯ ಚರಂಡಿ ಸ್ಥಿತಿ
ಸತ್ಯಮಂಗಲ ಮುಖ್ಯರಸ್ತೆಯ ಚರಂಡಿ ಸ್ಥಿತಿ
ಸತ್ಯಮಂಗಲದ ಹಲವು ಕಡೆಗಳಲ್ಲಿ ರಸ್ತೆ ಸರಿಯಾಗಿಲ್ಲ. ಇಂದಿಗೂ ಮಣ್ಣು ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಊರಿನಲ್ಲಿ ಎಲ್ಲ ಕಡೆ ಕಾಂಕ್ರಿಟ್‌ ಹಾಕಿದ್ದಾರೆ. ಊರಿನ ಹೊರವಲಯದ ರಸ್ತೆಗಳು ಅಧ್ವಾನ ಆಗಿವೆ.
ನಂಜಪ್ಪ ಸತ್ಯಮಂಗಲ
ಈ ಪ್ರದೇಶದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಮಾಯವಾಗಿದೆ. ಎಲ್ಲೆಂದರಲ್ಲಿ ಕಸ ಸುರಿದರೂ ಕೇಳುವವರು ಇಲ್ಲ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಕಸ ಸಂಗ್ರಹ ವಾಹನವೂ ಪ್ರತಿ ದಿನ ಬರುವುದಿಲ್ಲ.
ಚಂದ್ರಶೇಖರಯ್ಯ ಸತ್ಯಮಂಗಲ
ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಈಗ ದುಪ್ಪಟ್ಟಾಗಿದೆ. ಮಕ್ಕಳನ್ನು ಕಚ್ಚಲು ಬರುತ್ತವೆ. ಗ್ರಾಮದ ದೇವಸ್ಥಾನಕ್ಕೆ ಹೋಗಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಅಧಿಕಾರಿಗಳಿಗೆ ಒತ್ತಾಯಿಸಿದರೂ ಯಾರೊಬ್ಬರೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ.
ಸತ್ಯನಾರಾಯಣಾಚಾರ್‌ ಸತ್ಯಮಂಗಲ ಪಾಳ್ಯ
ಗ್ರಾಮದ ಯಾವ ಮನೆಗೂ ಚರಂಡಿ ಸರಿಯಾಗಿಲ್ಲ. ಅರ್ಧಂಬರ್ಧ ಕಾಮಗಾರಿಗಳು ನಡೆದಿವೆ. ಮಳೆ ಬಂದರೆ ಪ್ರತಿ ಮನೆ ಮುಂಭಾಗದಲ್ಲಿಯೇ ಕಲುಷಿತ ನೀರು ತುಂಬುತ್ತದೆ. ಶಾಸಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಎಸ್.ಕೆ.ಸುಶೀಲಮ್ಮ ಸತ್ಯಮಂಗಲ ಪಾಳ್ಯ
ಎಲ್ಲ ಪ್ರದೇಶಗಳು ನಗರ ಹೊರವಲಯದಲ್ಲಿವೆ. ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಾಲೆ–ಅಂಗನವಾಡಿ ದುರಸ್ತಿ ಪಡಿಸಲಾಗಿದೆ. ಶಿಕ್ಷಣ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ಕೊಡಲಾಗಿದೆ.
ಟಿ.ಕೆ.ನರಸಿಂಹಮೂರ್ತಿ ಮಾಜಿ ಸದಸ್ಯ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT