<p><strong>ತುಮಕೂರು:</strong> ಶ್ವೇತ ವಸ್ತ್ರಧಾರಿಗಳಾದ ವಿದ್ಯಾರ್ಥಿಗಳು ಅಲ್ಲಿ ಶಿಸ್ತಿನಿಂದ ಕುಳಿತು ಸಮಾರಂಭದಲ್ಲಿ ಭಾಗಿಯಾದರು. ತಮ್ಮ ಹೆಸರನ್ನು ನಿರೂಪಕರು ಕರೆದಾಗ ಸಾಧಕ ವಿದ್ಯಾರ್ಥಿಗಳು ಹೆಮ್ಮೆಯಿಂದ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದರು. ಅತಿಥಿ ಮಹೋದಯರಿಂದ ಚಿನ್ನದ ಪದಕಗಳನ್ನು, ಪದವಿ ಪ್ರಮಾಣಪತ್ರಗಳನ್ನು ಪಡೆದು ಅದೇ ಶಿಸ್ತುಭರಿತ ಸಂತಸದಿಂದ ವೇದಿಕೆಯಿಂದ ಕೆಳಗಿಳಿಯುತ್ತಿದ್ದರು. ಆ ವೇಳೆ ಸಭಿಕರಿಂದ ಕರತಾಡನ ಕೇಳಿ ಬರುತ್ತಿತ್ತು.</p>.<p>ತುಮಕೂರು ವಿಶ್ವವಿದ್ಯಾನಿಲಯದ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ ನಡೆದ 13ನೇ ಘಟಿಕೋತ್ಸವದ ನೋಟವಿದು.</p>.<p>ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ತಮ್ಮ ಸಾಧನೆಯನ್ನು ಅಭಿನಂದಿಸಲು ಬಂದವರಿಗೆ ನಗೆಯ ಉಡುಗೊರೆ ನೀಡುತ್ತಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.</p>.<p>ಶೈಕ್ಷಣಿಕ ಸಾಧಕರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಇದೇ ಸಮಾರಂಭದಲ್ಲಿ ಶಿಕ್ಷಣ, ಸಾಮಾಜಿಕ ಸೇವೆ, ವಿಜ್ಞಾನಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕುಣಿಗಲ್ನ ಸಿ.ಎನ್.ಮಂಚೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.</p>.<p>ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಮಾಣಿಕರಾವ್ ಎಂ.ಸಾಲುಂಖೆ ಅವರು ಘಟಿಕೋತ್ಸವ ಭಾಷಣದಲ್ಲಿ ಸಾಧಕರಾದ ಜೆ.ಕೆ.ರೋಲಿಂಗ್, ಸ್ಟೀವ್ ಜಾಬ್ಸ್, ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಉಕ್ತಿಗಳನ್ನು ಉಲ್ಲೇಖಿಸುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.</p>.<p>ಮಾಣಿಕರಾವ್ ಮಾತನಾಡುತ್ತ, ತಂತ್ರಜ್ಞಾನವು ವ್ಯವಹಾರ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸುತ್ತಿರುವ ‘ನಾಲ್ಕನೆಯ ಮಹಾಕ್ರಾಂತಿಯ’ ಕಾಲಘಟ್ಟದಲ್ಲಿ ನಾವಿದ್ದೇವೆ. ನವೋದ್ಯಮಗಳು ಬೆಳೆಯುತ್ತಿವೆ. ಕಂಪನಿಗಳು ಸಹ ಆವಿಷ್ಕಾರ ಮತ್ತು ನಾವೀನ್ಯತೆಗಳ ಹುಟುಕಾಟದಲ್ಲಿವೆ. ಈ ಬದಲಾವಣೆಯಿಂದ ನಿರುದ್ಯೋಗ ಹೆಚ್ಚುತ್ತಿದೆ. ಈ ಅನಿಶ್ಚಿತತೆ ನಡುವೆ ‘ರಿಸ್ಕ್’ ತೆಗೆದುಕೊಳ್ಳಲು ನಾವು ಸಿದ್ಧರಾಗಬೇಕು. ದೃತಿಗೆಡದೇ ಹೊಸ ಕೌಶಲಗಳನ್ನು ಗಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.</p>.<p>ತಪ್ಪುಗಳನ್ನು ತಿದ್ದಿಕೊಂಡು, ಮರೆಯಬೇಕು. ಹೊಸದನ್ನು ಕಲಿಯಬೇಕು. ‘ನಾವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ದುರ್ಬಲರು, ಆದರೆ, ನಾವು ಊಹಿಸುವುದಕ್ಕಿಂತಲೂ ನಾವು ಬಲಿಷ್ಠರು’ ಎಂಬ ಮಾತಿದೆ. ಪರಿಶ್ರಮವಹಿಸಿ ಕೆಲಸ ಮಾಡಿ, ನಮ್ಮ ಜೀವನ ರೂಪಿಸಿಕೊಂಡು, ದೇಶವನ್ನು ಕಟ್ಟೋಣ ಎಂದು ಸಲಹೆ ನೀಡಿದರು.</p>.<p>ಹೊಸ ಶಿಕ್ಷಣ ನೀತಿ ಅಳವಡಿಕೆಗೆ ಉತ್ಸುಕ: ಕುಲಪತಿ ವೈ.ಎಸ್.ಸಿದ್ದೇಗೌಡ ಅವರು ಮಾತನಾಡುತ್ತ, ವಿದ್ಯಾರ್ಥಿ ಸಮೂಹದಿಂದ ಸಲಹೆ, ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ಮತ್ತು ಔದ್ಯೋಗಿಕ ಕ್ಷೇತ್ರದ ಅಗತ್ಯತೆಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲಾಗುತ್ತಿದೆ. ಅದಕ್ಕಾಗಿ ಸರ್ಕಾರ ಮತ್ತು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯಡಿಯ ಅನುದಾನಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದರು.</p>.<p>ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ(ನ್ಯಾಕ್)ಎರಡನೇ ಆವೃತ್ತಿಯಲ್ಲಿ ಉತ್ತಮ ಗ್ರೇಡ್ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯ ಅಂಶಗಳನ್ನು ಅಳವಡಿಸಿಕೊಳ್ಳಲು ಸಹ ಉತ್ಸಕರಾಗಿದ್ದೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಶ್ವೇತ ವಸ್ತ್ರಧಾರಿಗಳಾದ ವಿದ್ಯಾರ್ಥಿಗಳು ಅಲ್ಲಿ ಶಿಸ್ತಿನಿಂದ ಕುಳಿತು ಸಮಾರಂಭದಲ್ಲಿ ಭಾಗಿಯಾದರು. ತಮ್ಮ ಹೆಸರನ್ನು ನಿರೂಪಕರು ಕರೆದಾಗ ಸಾಧಕ ವಿದ್ಯಾರ್ಥಿಗಳು ಹೆಮ್ಮೆಯಿಂದ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದರು. ಅತಿಥಿ ಮಹೋದಯರಿಂದ ಚಿನ್ನದ ಪದಕಗಳನ್ನು, ಪದವಿ ಪ್ರಮಾಣಪತ್ರಗಳನ್ನು ಪಡೆದು ಅದೇ ಶಿಸ್ತುಭರಿತ ಸಂತಸದಿಂದ ವೇದಿಕೆಯಿಂದ ಕೆಳಗಿಳಿಯುತ್ತಿದ್ದರು. ಆ ವೇಳೆ ಸಭಿಕರಿಂದ ಕರತಾಡನ ಕೇಳಿ ಬರುತ್ತಿತ್ತು.</p>.<p>ತುಮಕೂರು ವಿಶ್ವವಿದ್ಯಾನಿಲಯದ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ ನಡೆದ 13ನೇ ಘಟಿಕೋತ್ಸವದ ನೋಟವಿದು.</p>.<p>ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ತಮ್ಮ ಸಾಧನೆಯನ್ನು ಅಭಿನಂದಿಸಲು ಬಂದವರಿಗೆ ನಗೆಯ ಉಡುಗೊರೆ ನೀಡುತ್ತಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.</p>.<p>ಶೈಕ್ಷಣಿಕ ಸಾಧಕರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಇದೇ ಸಮಾರಂಭದಲ್ಲಿ ಶಿಕ್ಷಣ, ಸಾಮಾಜಿಕ ಸೇವೆ, ವಿಜ್ಞಾನಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕುಣಿಗಲ್ನ ಸಿ.ಎನ್.ಮಂಚೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.</p>.<p>ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಮಾಣಿಕರಾವ್ ಎಂ.ಸಾಲುಂಖೆ ಅವರು ಘಟಿಕೋತ್ಸವ ಭಾಷಣದಲ್ಲಿ ಸಾಧಕರಾದ ಜೆ.ಕೆ.ರೋಲಿಂಗ್, ಸ್ಟೀವ್ ಜಾಬ್ಸ್, ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಉಕ್ತಿಗಳನ್ನು ಉಲ್ಲೇಖಿಸುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.</p>.<p>ಮಾಣಿಕರಾವ್ ಮಾತನಾಡುತ್ತ, ತಂತ್ರಜ್ಞಾನವು ವ್ಯವಹಾರ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸುತ್ತಿರುವ ‘ನಾಲ್ಕನೆಯ ಮಹಾಕ್ರಾಂತಿಯ’ ಕಾಲಘಟ್ಟದಲ್ಲಿ ನಾವಿದ್ದೇವೆ. ನವೋದ್ಯಮಗಳು ಬೆಳೆಯುತ್ತಿವೆ. ಕಂಪನಿಗಳು ಸಹ ಆವಿಷ್ಕಾರ ಮತ್ತು ನಾವೀನ್ಯತೆಗಳ ಹುಟುಕಾಟದಲ್ಲಿವೆ. ಈ ಬದಲಾವಣೆಯಿಂದ ನಿರುದ್ಯೋಗ ಹೆಚ್ಚುತ್ತಿದೆ. ಈ ಅನಿಶ್ಚಿತತೆ ನಡುವೆ ‘ರಿಸ್ಕ್’ ತೆಗೆದುಕೊಳ್ಳಲು ನಾವು ಸಿದ್ಧರಾಗಬೇಕು. ದೃತಿಗೆಡದೇ ಹೊಸ ಕೌಶಲಗಳನ್ನು ಗಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.</p>.<p>ತಪ್ಪುಗಳನ್ನು ತಿದ್ದಿಕೊಂಡು, ಮರೆಯಬೇಕು. ಹೊಸದನ್ನು ಕಲಿಯಬೇಕು. ‘ನಾವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ದುರ್ಬಲರು, ಆದರೆ, ನಾವು ಊಹಿಸುವುದಕ್ಕಿಂತಲೂ ನಾವು ಬಲಿಷ್ಠರು’ ಎಂಬ ಮಾತಿದೆ. ಪರಿಶ್ರಮವಹಿಸಿ ಕೆಲಸ ಮಾಡಿ, ನಮ್ಮ ಜೀವನ ರೂಪಿಸಿಕೊಂಡು, ದೇಶವನ್ನು ಕಟ್ಟೋಣ ಎಂದು ಸಲಹೆ ನೀಡಿದರು.</p>.<p>ಹೊಸ ಶಿಕ್ಷಣ ನೀತಿ ಅಳವಡಿಕೆಗೆ ಉತ್ಸುಕ: ಕುಲಪತಿ ವೈ.ಎಸ್.ಸಿದ್ದೇಗೌಡ ಅವರು ಮಾತನಾಡುತ್ತ, ವಿದ್ಯಾರ್ಥಿ ಸಮೂಹದಿಂದ ಸಲಹೆ, ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ಮತ್ತು ಔದ್ಯೋಗಿಕ ಕ್ಷೇತ್ರದ ಅಗತ್ಯತೆಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲಾಗುತ್ತಿದೆ. ಅದಕ್ಕಾಗಿ ಸರ್ಕಾರ ಮತ್ತು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯಡಿಯ ಅನುದಾನಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದರು.</p>.<p>ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ(ನ್ಯಾಕ್)ಎರಡನೇ ಆವೃತ್ತಿಯಲ್ಲಿ ಉತ್ತಮ ಗ್ರೇಡ್ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯ ಅಂಶಗಳನ್ನು ಅಳವಡಿಸಿಕೊಳ್ಳಲು ಸಹ ಉತ್ಸಕರಾಗಿದ್ದೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>