<p><strong>ಹುಲಿಯೂರುದುರ್ಗ:</strong> ‘ಮಳೆ ಬರುವಂತಿಲ್ಲ ಬೆಳೆ ತೆಗೆಯುವಂತಿಲ್ಲ’ ಎನ್ನುವ ಅತಂತ್ರ ಪರಿಸ್ಥಿತಿ ರೈತರದ್ದಾಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಬೇಸತ್ತು ಸಾಂಪ್ರದಾಯಿಕ ಬೆಳೆಗಳಾದ ಭತ್ತ, ರಾಗಿಗೆ ಪರ್ಯಾಯವಾಗಿ ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ಸು ಕಾಣುತ್ತಿದ್ದಾರೆ ಈ ಸಹೋದರರು.</p>.<p>ಕೆ.ಹೊನ್ನಮಾಚನಹಳ್ಳಿಯ ಎಚ್.ಜಿ.ಶ್ರೀಧರ್ ಹಾಗೂ ಎಚ್.ಜಿ.ಆನಂದ್ ಬದನೆ ಬೆಳೆದು ಲಾಭ ಕಾಣುವ ಮೂಲಕ ಕೃಷಿಯಲ್ಲಿ ಪರಿವರ್ತನೆಯ ದಾರಿ ಹಿಡಿದಿದ್ದಾರೆ.</p>.<p>ರಾಮೇದೇವರ ಪಾಳ್ಯದ ಲಿಂಗೇಶ್ ಎಂಬುವವರು ಬದನೆ ಕೃಷಿಯಲ್ಲಿ ಪಡೆದ ಯಶಸ್ಸು ಇವರಿಗೆ ಪ್ರೇರಣೆ ಆಯಿತು. ಹದಿನೈದು ಗುಂಟೆಯಲ್ಲಿ ಬೆಳೆದ ಬದನೆ ₹ 1 ಲಕ್ಷ ಆದಾಯ ತಂದುಕೊಟ್ಟಿದ್ದು ಇವರನ್ನೂ ಬದನೆ ಬೇಸಾಯದಲ್ಲಿ ತೊಡಗುವಂತೆ ಮಾಡಿತು.</p>.<p>ಪರೀಕ್ಷಾರ್ಥವಾಗಿ 20 ಗುಂಟೆಯಲ್ಲಿ ಬೆಳೆದ ಬದನೆ ಅವರ ಭರವಸೆ ಹುಸಿಗೊಳಿಸಲಿಲ್ಲ. ಮೂರು ತಿಂಗಳ ಫಸಲು ಅವರಿಗೆ ₹ 25 ಸಾವಿರ ಲಾಭ ತಂದು ಕೊಟ್ಟಿದೆ. ಇನ್ನೂ 2-3 ತಿಂಗಳು ದೊರೆಯಲಿರುವ ಫಸಲಿನಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಮೊದಲು ಮೂರು ಎಕರೆ ರಾಗಿ ಬೆಳೆದು ₹ 50 ಸಾವಿರವಷ್ಟೇ ಗಳಿಕೆ ಕಂಡಿದ್ದ ಇವರನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತಂದಿರುವ ಬದನೆ ಕೃಷಿಯ ವಿಸ್ತರಣೆಗೆ ಮುಂದಾಗುವಂತೆ ಮಾಡಿದೆ.</p>.<p>ತೊರೆಯ ಅಂಚಿನ ಮೂರು ಎಕರೆ ವಿಸ್ತೀರ್ಣದಲ್ಲಿ ಬದನೆ ನಾಟಿಗೆ ಮುಂದಾಗಿದ್ದಾರೆ. ಮರಳಿನ ಕೊಳವೆಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿದ್ದು, ಹನಿ ನೀರಾವರಿ ಮೂಲಕ ದೊಡ್ಡಮಟ್ಟದಲ್ಲಿ ಬದನೆ ಕೃಷಿ ಕೈಗೊಂಡಿದ್ದಾರೆ.</p>.<p>ಮರಳು ಮಿಶ್ರಿತ ಗೋಡು, ಕೆಬ್ಬೆಯ ಅದುರು ಮಣ್ಣು ಹೆಚ್ಚು ಸೂಕ್ತ ಎನ್ನುತ್ತಾರೆ ಈ ಸಹೋದರರು. ಕೊಟ್ಟಿಗೆ ಗೊಬ್ಬರ ಸೇರಿಸಿದ ಮಣ್ಣಿನ ರೈಸರ್ ಬೆಡ್ ಮೇಲೆ ಸರಿಯಾದ ಅಂತರದಲ್ಲಿ ನಾಟಿ ಮಾಡುವುದು ಅವಶ್ಯಕ ಎನ್ನುತ್ತಾರೆ.</p>.<p>ಬದನೆ ಕೃಷಿಯ ನಿರ್ವಹಣಾ ವೆಚ್ಚಗಳು ಕಡಿಮೆ ಎಂದರೂ ಹೂವು, ಕಾಯಿ ಕೊರಕ ಕೊಟ್ಟೆ ಹುಳುಗಳ ಬಾಧೆ ಹೆಚ್ಚು. ನಿಯಂತ್ರಣಕ್ಕಾಗಿ ವಾರದಲ್ಲಿ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಬೇಕು. ಮೇಲು ಗೊಬ್ಬರವಾಗಿ ಡಿಎಪಿ, ಕಬ್ಬಿನ ಉಪ್ಪು, 20- 20, ಸಿಎನ್ಎನ್ ಹಾಗೂ ಲಘು ಪೋಷಕಾಂಶಗಳನ್ನು ದ್ರವ ರೂಪದಲ್ಲಿ ಡ್ರಿಪ್ ಮೂಲಕ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.</p>.<p>*</p>.<p>ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ವಾರಕ್ಕೆ ಒಮ್ಮೆ 20ರಿಂದ 30 ಚೀಲ ಬದನೆಯಕಾಯಿ ಪೂರೈಸುತ್ತಿದ್ದೇವೆ. ಚೀಲವೊಂದಕ್ಕೆ ಕನಿಷ್ಠ ₹ 150 ಸಿಗುತ್ತಿದೆ. ಕೆಲವೊಮ್ಮೆ ₹ 350ರವರೆಗೆ ಬೆಲೆ ಹೆಚ್ಚುತ್ತದೆ. ಮಂಡಿ ಮಾಲೀಕರು ಪ್ರತಿ ₹ 1000ಕ್ಕೆ ₹ 100 ಕಮೀಷನ್ ಪಡೆಯುತ್ತಾರೆ.<br /><em><strong>- ಎಚ್.ಜಿ.ಶ್ರೀಧರ್</strong></em></p>.<p><em><strong>*</strong></em><br />ತೊಟ್ಟು ಕಪ್ಪಾಗದಂತೆ ಎಚ್ಚರ ವಹಿಸಬೇಕು. ಹುಳುಕಿಲ್ಲದ ಹೊಳಪಿನ ಬದನೆಗೆ ಬೇಡಿಕೆ ಹೆಚ್ಚು. ಕೆಂಪು ಬಣ್ಣದ ಗುಂಡು ಬದನೆ ಬೆಳೆಯುವ ಉದ್ದೇಶ ಇದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೆಚ್ಚಿನ ಖರ್ಚು ವೆಚ್ಚಗಳ ಹೊರತಾಗಿಯೂ ಬದನೆ ಕೃಷಿ ಲಾಭದಾಯಕವಾಗಿದೆ.<br /><em><strong>- ಲಿಂಗೇಶ್, ರಾಮೇದೇವರ ಪಾಳ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಯೂರುದುರ್ಗ:</strong> ‘ಮಳೆ ಬರುವಂತಿಲ್ಲ ಬೆಳೆ ತೆಗೆಯುವಂತಿಲ್ಲ’ ಎನ್ನುವ ಅತಂತ್ರ ಪರಿಸ್ಥಿತಿ ರೈತರದ್ದಾಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಬೇಸತ್ತು ಸಾಂಪ್ರದಾಯಿಕ ಬೆಳೆಗಳಾದ ಭತ್ತ, ರಾಗಿಗೆ ಪರ್ಯಾಯವಾಗಿ ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ಸು ಕಾಣುತ್ತಿದ್ದಾರೆ ಈ ಸಹೋದರರು.</p>.<p>ಕೆ.ಹೊನ್ನಮಾಚನಹಳ್ಳಿಯ ಎಚ್.ಜಿ.ಶ್ರೀಧರ್ ಹಾಗೂ ಎಚ್.ಜಿ.ಆನಂದ್ ಬದನೆ ಬೆಳೆದು ಲಾಭ ಕಾಣುವ ಮೂಲಕ ಕೃಷಿಯಲ್ಲಿ ಪರಿವರ್ತನೆಯ ದಾರಿ ಹಿಡಿದಿದ್ದಾರೆ.</p>.<p>ರಾಮೇದೇವರ ಪಾಳ್ಯದ ಲಿಂಗೇಶ್ ಎಂಬುವವರು ಬದನೆ ಕೃಷಿಯಲ್ಲಿ ಪಡೆದ ಯಶಸ್ಸು ಇವರಿಗೆ ಪ್ರೇರಣೆ ಆಯಿತು. ಹದಿನೈದು ಗುಂಟೆಯಲ್ಲಿ ಬೆಳೆದ ಬದನೆ ₹ 1 ಲಕ್ಷ ಆದಾಯ ತಂದುಕೊಟ್ಟಿದ್ದು ಇವರನ್ನೂ ಬದನೆ ಬೇಸಾಯದಲ್ಲಿ ತೊಡಗುವಂತೆ ಮಾಡಿತು.</p>.<p>ಪರೀಕ್ಷಾರ್ಥವಾಗಿ 20 ಗುಂಟೆಯಲ್ಲಿ ಬೆಳೆದ ಬದನೆ ಅವರ ಭರವಸೆ ಹುಸಿಗೊಳಿಸಲಿಲ್ಲ. ಮೂರು ತಿಂಗಳ ಫಸಲು ಅವರಿಗೆ ₹ 25 ಸಾವಿರ ಲಾಭ ತಂದು ಕೊಟ್ಟಿದೆ. ಇನ್ನೂ 2-3 ತಿಂಗಳು ದೊರೆಯಲಿರುವ ಫಸಲಿನಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಮೊದಲು ಮೂರು ಎಕರೆ ರಾಗಿ ಬೆಳೆದು ₹ 50 ಸಾವಿರವಷ್ಟೇ ಗಳಿಕೆ ಕಂಡಿದ್ದ ಇವರನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತಂದಿರುವ ಬದನೆ ಕೃಷಿಯ ವಿಸ್ತರಣೆಗೆ ಮುಂದಾಗುವಂತೆ ಮಾಡಿದೆ.</p>.<p>ತೊರೆಯ ಅಂಚಿನ ಮೂರು ಎಕರೆ ವಿಸ್ತೀರ್ಣದಲ್ಲಿ ಬದನೆ ನಾಟಿಗೆ ಮುಂದಾಗಿದ್ದಾರೆ. ಮರಳಿನ ಕೊಳವೆಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿದ್ದು, ಹನಿ ನೀರಾವರಿ ಮೂಲಕ ದೊಡ್ಡಮಟ್ಟದಲ್ಲಿ ಬದನೆ ಕೃಷಿ ಕೈಗೊಂಡಿದ್ದಾರೆ.</p>.<p>ಮರಳು ಮಿಶ್ರಿತ ಗೋಡು, ಕೆಬ್ಬೆಯ ಅದುರು ಮಣ್ಣು ಹೆಚ್ಚು ಸೂಕ್ತ ಎನ್ನುತ್ತಾರೆ ಈ ಸಹೋದರರು. ಕೊಟ್ಟಿಗೆ ಗೊಬ್ಬರ ಸೇರಿಸಿದ ಮಣ್ಣಿನ ರೈಸರ್ ಬೆಡ್ ಮೇಲೆ ಸರಿಯಾದ ಅಂತರದಲ್ಲಿ ನಾಟಿ ಮಾಡುವುದು ಅವಶ್ಯಕ ಎನ್ನುತ್ತಾರೆ.</p>.<p>ಬದನೆ ಕೃಷಿಯ ನಿರ್ವಹಣಾ ವೆಚ್ಚಗಳು ಕಡಿಮೆ ಎಂದರೂ ಹೂವು, ಕಾಯಿ ಕೊರಕ ಕೊಟ್ಟೆ ಹುಳುಗಳ ಬಾಧೆ ಹೆಚ್ಚು. ನಿಯಂತ್ರಣಕ್ಕಾಗಿ ವಾರದಲ್ಲಿ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಬೇಕು. ಮೇಲು ಗೊಬ್ಬರವಾಗಿ ಡಿಎಪಿ, ಕಬ್ಬಿನ ಉಪ್ಪು, 20- 20, ಸಿಎನ್ಎನ್ ಹಾಗೂ ಲಘು ಪೋಷಕಾಂಶಗಳನ್ನು ದ್ರವ ರೂಪದಲ್ಲಿ ಡ್ರಿಪ್ ಮೂಲಕ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.</p>.<p>*</p>.<p>ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ವಾರಕ್ಕೆ ಒಮ್ಮೆ 20ರಿಂದ 30 ಚೀಲ ಬದನೆಯಕಾಯಿ ಪೂರೈಸುತ್ತಿದ್ದೇವೆ. ಚೀಲವೊಂದಕ್ಕೆ ಕನಿಷ್ಠ ₹ 150 ಸಿಗುತ್ತಿದೆ. ಕೆಲವೊಮ್ಮೆ ₹ 350ರವರೆಗೆ ಬೆಲೆ ಹೆಚ್ಚುತ್ತದೆ. ಮಂಡಿ ಮಾಲೀಕರು ಪ್ರತಿ ₹ 1000ಕ್ಕೆ ₹ 100 ಕಮೀಷನ್ ಪಡೆಯುತ್ತಾರೆ.<br /><em><strong>- ಎಚ್.ಜಿ.ಶ್ರೀಧರ್</strong></em></p>.<p><em><strong>*</strong></em><br />ತೊಟ್ಟು ಕಪ್ಪಾಗದಂತೆ ಎಚ್ಚರ ವಹಿಸಬೇಕು. ಹುಳುಕಿಲ್ಲದ ಹೊಳಪಿನ ಬದನೆಗೆ ಬೇಡಿಕೆ ಹೆಚ್ಚು. ಕೆಂಪು ಬಣ್ಣದ ಗುಂಡು ಬದನೆ ಬೆಳೆಯುವ ಉದ್ದೇಶ ಇದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೆಚ್ಚಿನ ಖರ್ಚು ವೆಚ್ಚಗಳ ಹೊರತಾಗಿಯೂ ಬದನೆ ಕೃಷಿ ಲಾಭದಾಯಕವಾಗಿದೆ.<br /><em><strong>- ಲಿಂಗೇಶ್, ರಾಮೇದೇವರ ಪಾಳ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>