ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತದೆ. ಶೆಲ್ಟರ್ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ.
ಎ.ಎಲ್.ನಾಗರಾಜ್, ವ್ಯವಸ್ಥಾಪಕ, ತುಮಕೂರು ರೈಲು ನಿಲ್ದಾಣ
ತುಮಕೂರು ರೈಲು ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ನಿಲ್ದಾಣದಲ್ಲಿ ಅಂಗವಿಕಲರು ವ್ಹೀಲ್ಚೇರ್ನಲ್ಲಿ ಓಡಾಡಲು ಬೇಕಾದ ವ್ಯವಸ್ಥೆ ಮಾಡಬೇಕು. ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು ಜನರ ಓಡಾಟವೂ ಜಾಸ್ತಿ ಇದೆ. ಜನರ ಅನುಕೂಲಕ್ಕಾಗಿ ರೈಲು ನಿಲ್ದಾಣದಲ್ಲಿ ಟ್ರ್ಯಾಕ್ಗಳನ್ನು ಹೆಚ್ಚಿಸಬೇಕು.
ಬಾ.ಹ.ರಮಾಕುಮಾರಿ, ಅಧ್ಯಕ್ಷರು, ರೈಲು ಪ್ರಯಾಣಿಕರ ವೇದಿಕೆ
ಎಂಟು ವರ್ಷದ ಬೇಡಿಕೆ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡುವಂತೆ ಕಳೆದ ಎಂಟು ವರ್ಷಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದೇವೆ. ಕೊನೆಗೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇದು ತುಂಬಾ ಜನರಿಗೆ ಸಹಾಯವಾಗಲಿದೆ. ನಿಲ್ದಾಣದಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ.
ಕರಣಂ ರಮೇಶ್, ಕಾರ್ಯದರ್ಶಿ, ರೈಲು ಪ್ರಯಾಣಿಕರ ವೇದಿಕೆ
ತುಮಕೂರು ರೈಲು ನಿಲ್ದಾಣದ ಬಳಿಯ ಕೆಳ ಸೇತುವೆ ನಿರ್ಮಾಣದ ಜಾಗದಲ್ಲಿ ಗಿಡಗಳು ಬೆಳೆದಿರುವುದು