ಇಂತಹ ಸಂಸ್ಕೃತವನ್ನು ಇಲ್ಲಿ ಎಲ್ಲ ಮಕ್ಕಳಿಗೆ ಕಲಿಸುತ್ತಿದ್ದಾರೆ. ಇದು ದೊಡ್ಡ ಸಾಧನೆ ಎಂದರು. ಸಂಸ್ಕೃತದ ಶ್ಲೋಕಗಳನ್ನು ಉದಾಹರಿಸಿದರು. ನಮ್ಮ ಗುರುಕುಲ ಪದ್ಧತಿಯ ಶಿಕ್ಷಣ ಕಾಡುಗಳಲ್ಲಿ ನಡೆಯುತ್ತಿತ್ತು. ಶಿಕ್ಷಣ ಇಲ್ಲದಿದ್ದವರು ಪಶುವಿಗೆ ಸಮಾನ ಎನ್ನುವಂತೆ ಇತ್ತು. ಆದರೆ ಈಗ ಶಿಕ್ಷಣ ಎಲ್ಲರಿಗೂ ದೊರೆಯುತ್ತಿದೆ ಎಂದು ಪ್ರತಾಪಚಂದ್ರ ಸಾರಂಗಿ ಹೇಳಿದರು.