<p><strong>ಕೊಡಿಗೇನಹಳ್ಳಿ:</strong> ‘ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ಸಾರಥ್ಯ ಅನಿವಾರ್ಯ’ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದರು.</p>.<p>ದೇಶದ ಎಲ್ಲ ರಾಜ್ಯದ ಜನರು, ರೈತರು ಒಟ್ಟಾಗಲು, ನದಿ ಜೋಡಣೆಯಂತಹ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದ ಮಹಾತ್ಮ ವಾಜಪೇಯಿ. ಅವರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯವಾಗಿದ್ದು ಅದರಂತೆ ನರೇಂದ್ರ ಮೋದಿ ಸರ್ಕಾರ ನಡೆಯುತ್ತಿದೆ. ಬರಪೀಡಿತ ಮಧುಗಿರಿ, ಕೊರಟಗೆರೆ ಎರಡು ಕಣ್ಣುಗಳಂತಿದ್ದು, ಈ ಕ್ಷೇತ್ರದ ರೈತರ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡಲಾಗಿದೆ ಎಂದರು.</p>.<p>ಮಧುಗಿರಿ ಕೈಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಸರ್ಕಾರ ಕಡಿಮೆ ಹಣ ನೀಡಲು ಮುಂದಾಗಿದೆ. ಆದರೆ ₹17 ಲಕ್ಷದಿಂದ ₹22 ಲಕ್ಷಕ್ಕೆ ಏರಿಸಿದರೆ ರೈತರು ಭೂಮಿ ನೀಡಬಹುದು ಎಂದು ಹೇಳಿದ್ದೇನೆ ಎಂದರು. ಆದರೆ ಅದಕ್ಕೆ ಅಲ್ಲೇ ಕುಳಿತಿದ್ದ ಸ್ಥಳೀಯ ರೈತರು ಒಪ್ಪಲಿಲ್ಲ. </p>.<p>ಎಲ್.ಸಿ. ನಾಗರಾಜು, ಪುರವರ ಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಬಿ ಕೆ ಮಂಜುನಾಥ್, ಚಿಕ್ಕೋಬರೆಡ್ಡಿ, ಎಸ್.ಡಿ. ಕೃಷ್ಣಪ್ಪ, ಎಂ.ಆರ್. ಜಗನ್ನಾಥ್, ಗಂಗರಾಜು, ನೀರಗಲ್ಲು, ರಾಮಕೃಷ್ಣಪ್ಪ, ಶ್ರೀನಿವಾಸ್, ಆರ್. ವೆಂಕಟೇಶ್, ಅಶ್ವತ್ಥನಾರಾಯಣ, ಲಕ್ಷ್ಮಿಪತಿ, ಶಿವಲಿಂಗಯ್ಯ, ರಾಜಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ:</strong> ‘ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ಸಾರಥ್ಯ ಅನಿವಾರ್ಯ’ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.</p>.<p>ಪಟ್ಟಣದಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದರು.</p>.<p>ದೇಶದ ಎಲ್ಲ ರಾಜ್ಯದ ಜನರು, ರೈತರು ಒಟ್ಟಾಗಲು, ನದಿ ಜೋಡಣೆಯಂತಹ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದ ಮಹಾತ್ಮ ವಾಜಪೇಯಿ. ಅವರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯವಾಗಿದ್ದು ಅದರಂತೆ ನರೇಂದ್ರ ಮೋದಿ ಸರ್ಕಾರ ನಡೆಯುತ್ತಿದೆ. ಬರಪೀಡಿತ ಮಧುಗಿರಿ, ಕೊರಟಗೆರೆ ಎರಡು ಕಣ್ಣುಗಳಂತಿದ್ದು, ಈ ಕ್ಷೇತ್ರದ ರೈತರ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡಲಾಗಿದೆ ಎಂದರು.</p>.<p>ಮಧುಗಿರಿ ಕೈಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಸರ್ಕಾರ ಕಡಿಮೆ ಹಣ ನೀಡಲು ಮುಂದಾಗಿದೆ. ಆದರೆ ₹17 ಲಕ್ಷದಿಂದ ₹22 ಲಕ್ಷಕ್ಕೆ ಏರಿಸಿದರೆ ರೈತರು ಭೂಮಿ ನೀಡಬಹುದು ಎಂದು ಹೇಳಿದ್ದೇನೆ ಎಂದರು. ಆದರೆ ಅದಕ್ಕೆ ಅಲ್ಲೇ ಕುಳಿತಿದ್ದ ಸ್ಥಳೀಯ ರೈತರು ಒಪ್ಪಲಿಲ್ಲ. </p>.<p>ಎಲ್.ಸಿ. ನಾಗರಾಜು, ಪುರವರ ಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಬಿ ಕೆ ಮಂಜುನಾಥ್, ಚಿಕ್ಕೋಬರೆಡ್ಡಿ, ಎಸ್.ಡಿ. ಕೃಷ್ಣಪ್ಪ, ಎಂ.ಆರ್. ಜಗನ್ನಾಥ್, ಗಂಗರಾಜು, ನೀರಗಲ್ಲು, ರಾಮಕೃಷ್ಣಪ್ಪ, ಶ್ರೀನಿವಾಸ್, ಆರ್. ವೆಂಕಟೇಶ್, ಅಶ್ವತ್ಥನಾರಾಯಣ, ಲಕ್ಷ್ಮಿಪತಿ, ಶಿವಲಿಂಗಯ್ಯ, ರಾಜಕುಮಾರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>