ಪ್ರತಿಷ್ಠಾನದ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶಿವನು ನಾದಪ್ರಿಯನಲ್ಲ, ವೇದಪ್ರಿಯನಲ್ಲ ಭಕ್ತಿಪ್ರಿಯ ಎಂದು ತೋರಿಸಿಕೊಟ್ಟ ಬಸವಣ್ಣನವರ ತತ್ವಕ್ಕೆ ವಿಶ್ವವೇ ತಲೆದೂಗುತ್ತಿದೆ. ಇದಕ್ಕೆ ಲಂಡನ್ನಲ್ಲಿ ಸ್ಥಾಪಿಸಿರುವ ಬಸವ ಪುತ್ಥಳಿಯೇ ಉದಾಹರಣೆ. ಸ್ತ್ರೀಸಮಾನತೆಯ ಅಡಿಗಲ್ಲನ್ನು ಸುಂದರ ಕಟ್ಟಡವನ್ನಾಗಿ ನಿರ್ಮಾಣ ಮಾಡಿದ ಅಗ್ಗಳಿಕೆ ಶರಣರದ್ದು ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಶೈಲಜಾ, ಮುಖ್ಯಶಿಕ್ಷಕಿ ಸುಶೀಲಮ್ಮ, ಶಿಕ್ಷಕರಾದ ಶಾರದಮ್ಮ, ಹೊನ್ನಮ್ಮ, ವರಲಕ್ಷ್ಮಿ, ಗಿರಿಜೇಶ್, ವಚನ ಇದ್ದರು.