ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ | ಕೆರೆಗೆ ನೀರು; ಶಾಶ್ವತ ಪರಿಹಾರ ಅಗತ್ಯ

Last Updated 22 ನವೆಂಬರ್ 2020, 11:30 IST
ಅಕ್ಷರ ಗಾತ್ರ

ಶಿರಾ: ‘ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ನಿಗದಿ ಮಾಡಿ ನೀರು ಹರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮದಲೂರು ಗ್ರಾಮದ ಕೆರೆಗೆ ಭಾನುವಾರ ಭೇಟಿ ನೀಡಿ ಕೆರೆ ಸ್ವಚ್ಛತೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ಮದಲೂರು ಕೆರೆಗೆ ಈ ಬಾರಿ ಮಾತ್ರ ನೀರು ಹರಿದರೆ ರಾಜಕೀಯ ಪ್ರೇರಿತ ಎನ್ನುವ ಭಾವನೆ ಬರುತ್ತದೆ. ಅದ್ದರಿಂದ ಈ ಬಗ್ಗೆ ಶಾಸಕರು ಜಾಗೃತವಾಗಬೇಕು ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯಿಂದ ಮಾತ್ರ ಶಿರಾ ತಾಲ್ಲೂಕಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಅದರ ಕಾಮಗಾರಿ ಮುಗಿಯಲು ಇನ್ನು ಕನಿಷ್ಠ 4-5 ವರ್ಷ ಬೇಕು. ಈಗ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳನ್ನು ಪಟ್ಟಿ ಮಾಡಿ ಯೋಜನೆಗೆ ಸೇರಿಸಲು ಶಾಸಕರು ಮುಂದಾಗಬೇಕು’ ಎಂದರು.

‘ಮದಲೂರು ಕೆರೆಗೆ ನೀರು ಹರಿಸುವುದನ್ನು ಜಿಲ್ಲೆಯ ಮುಖಂಡರು ವಿರೋಧಿಸುತ್ತಿರುವುದು ನೋವಿನ ವಿಚಾರ. ಈ ಬಗ್ಗೆ ಶಾಸಕ ಡಾ.ರಂಗನಾಥ್ ಜತೆ ಮಾತನಾಡಿದ್ದೇನೆ. ಬಯಲು ಸೀಮೆಯ ಜನರ ನೀರಿನ ನೋವಿನ ಸಂಕಷ್ಟ ಯಾರಿಗೂ ಬೇಡ’ ಎಂದರು.

ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ಅಡ್ಡಿ ಬರದಂತೆ ಬಹುಗ್ರಾಮ ನೀರಿನ ಯೋಜನೆಗಳನ್ನು ರೂಪಿಸುವಂತೆ ಶಾಸಕರಿಗೆ ಕಿವಿ ಮಾತು ಹೇಳಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಲು ನಿರ್ದೇಶಕ ಎಸ್.ಆರ್.ಗೌಡ, ಮುಖಂಡ ನರಸಿಂಹಮೂರ್ತಿ, ಲಿಂಗದಹಳ್ಳಿ ಸುಧಾಕರ ಗೌಡ, ಮದ್ದೇವಳ್ಳಿ ರಾಮಕೃಷ್ಣ, ಲಕ್ಕನಹಳ್ಳಿ ಮಂಜುನಾಥ್, ಪ್ರಕಾಶ್ ಗೌಡ, ಬಿ.ಎಚ್.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT