<p><strong>ಶಿರಾ: </strong>‘ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ನಿಗದಿ ಮಾಡಿ ನೀರು ಹರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮದಲೂರು ಗ್ರಾಮದ ಕೆರೆಗೆ ಭಾನುವಾರ ಭೇಟಿ ನೀಡಿ ಕೆರೆ ಸ್ವಚ್ಛತೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.</p>.<p>ಮದಲೂರು ಕೆರೆಗೆ ಈ ಬಾರಿ ಮಾತ್ರ ನೀರು ಹರಿದರೆ ರಾಜಕೀಯ ಪ್ರೇರಿತ ಎನ್ನುವ ಭಾವನೆ ಬರುತ್ತದೆ. ಅದ್ದರಿಂದ ಈ ಬಗ್ಗೆ ಶಾಸಕರು ಜಾಗೃತವಾಗಬೇಕು ಎಂದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಿಂದ ಮಾತ್ರ ಶಿರಾ ತಾಲ್ಲೂಕಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಅದರ ಕಾಮಗಾರಿ ಮುಗಿಯಲು ಇನ್ನು ಕನಿಷ್ಠ 4-5 ವರ್ಷ ಬೇಕು. ಈಗ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳನ್ನು ಪಟ್ಟಿ ಮಾಡಿ ಯೋಜನೆಗೆ ಸೇರಿಸಲು ಶಾಸಕರು ಮುಂದಾಗಬೇಕು’ ಎಂದರು.</p>.<p>‘ಮದಲೂರು ಕೆರೆಗೆ ನೀರು ಹರಿಸುವುದನ್ನು ಜಿಲ್ಲೆಯ ಮುಖಂಡರು ವಿರೋಧಿಸುತ್ತಿರುವುದು ನೋವಿನ ವಿಚಾರ. ಈ ಬಗ್ಗೆ ಶಾಸಕ ಡಾ.ರಂಗನಾಥ್ ಜತೆ ಮಾತನಾಡಿದ್ದೇನೆ. ಬಯಲು ಸೀಮೆಯ ಜನರ ನೀರಿನ ನೋವಿನ ಸಂಕಷ್ಟ ಯಾರಿಗೂ ಬೇಡ’ ಎಂದರು.</p>.<p>ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ಅಡ್ಡಿ ಬರದಂತೆ ಬಹುಗ್ರಾಮ ನೀರಿನ ಯೋಜನೆಗಳನ್ನು ರೂಪಿಸುವಂತೆ ಶಾಸಕರಿಗೆ ಕಿವಿ ಮಾತು ಹೇಳಿದರು.</p>.<p>ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಲು ನಿರ್ದೇಶಕ ಎಸ್.ಆರ್.ಗೌಡ, ಮುಖಂಡ ನರಸಿಂಹಮೂರ್ತಿ, ಲಿಂಗದಹಳ್ಳಿ ಸುಧಾಕರ ಗೌಡ, ಮದ್ದೇವಳ್ಳಿ ರಾಮಕೃಷ್ಣ, ಲಕ್ಕನಹಳ್ಳಿ ಮಂಜುನಾಥ್, ಪ್ರಕಾಶ್ ಗೌಡ, ಬಿ.ಎಚ್.ಸತೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ: </strong>‘ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ನಿಗದಿ ಮಾಡಿ ನೀರು ಹರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮದಲೂರು ಗ್ರಾಮದ ಕೆರೆಗೆ ಭಾನುವಾರ ಭೇಟಿ ನೀಡಿ ಕೆರೆ ಸ್ವಚ್ಛತೆಯ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.</p>.<p>ಮದಲೂರು ಕೆರೆಗೆ ಈ ಬಾರಿ ಮಾತ್ರ ನೀರು ಹರಿದರೆ ರಾಜಕೀಯ ಪ್ರೇರಿತ ಎನ್ನುವ ಭಾವನೆ ಬರುತ್ತದೆ. ಅದ್ದರಿಂದ ಈ ಬಗ್ಗೆ ಶಾಸಕರು ಜಾಗೃತವಾಗಬೇಕು ಎಂದರು.</p>.<p>‘ಭದ್ರಾ ಮೇಲ್ದಂಡೆ ಯೋಜನೆಯಿಂದ ಮಾತ್ರ ಶಿರಾ ತಾಲ್ಲೂಕಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಅದರ ಕಾಮಗಾರಿ ಮುಗಿಯಲು ಇನ್ನು ಕನಿಷ್ಠ 4-5 ವರ್ಷ ಬೇಕು. ಈಗ ಯೋಜನೆಯಲ್ಲಿ ಕೈಬಿಟ್ಟಿರುವ ಕೆರೆಗಳನ್ನು ಪಟ್ಟಿ ಮಾಡಿ ಯೋಜನೆಗೆ ಸೇರಿಸಲು ಶಾಸಕರು ಮುಂದಾಗಬೇಕು’ ಎಂದರು.</p>.<p>‘ಮದಲೂರು ಕೆರೆಗೆ ನೀರು ಹರಿಸುವುದನ್ನು ಜಿಲ್ಲೆಯ ಮುಖಂಡರು ವಿರೋಧಿಸುತ್ತಿರುವುದು ನೋವಿನ ವಿಚಾರ. ಈ ಬಗ್ಗೆ ಶಾಸಕ ಡಾ.ರಂಗನಾಥ್ ಜತೆ ಮಾತನಾಡಿದ್ದೇನೆ. ಬಯಲು ಸೀಮೆಯ ಜನರ ನೀರಿನ ನೋವಿನ ಸಂಕಷ್ಟ ಯಾರಿಗೂ ಬೇಡ’ ಎಂದರು.</p>.<p>ಮದಲೂರು ಕೆರೆಗೆ ನೀರು ಹರಿಸಲು ಕಾನೂನಿನ ಅಡ್ಡಿ ಬರದಂತೆ ಬಹುಗ್ರಾಮ ನೀರಿನ ಯೋಜನೆಗಳನ್ನು ರೂಪಿಸುವಂತೆ ಶಾಸಕರಿಗೆ ಕಿವಿ ಮಾತು ಹೇಳಿದರು.</p>.<p>ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮಲು ನಿರ್ದೇಶಕ ಎಸ್.ಆರ್.ಗೌಡ, ಮುಖಂಡ ನರಸಿಂಹಮೂರ್ತಿ, ಲಿಂಗದಹಳ್ಳಿ ಸುಧಾಕರ ಗೌಡ, ಮದ್ದೇವಳ್ಳಿ ರಾಮಕೃಷ್ಣ, ಲಕ್ಕನಹಳ್ಳಿ ಮಂಜುನಾಥ್, ಪ್ರಕಾಶ್ ಗೌಡ, ಬಿ.ಎಚ್.ಸತೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>