<p><strong>ತುಮಕೂರು</strong>: ಕರಾವಳಿಯಲ್ಲಿ ಯಕ್ಷಗಾನ ರೂಪದಲ್ಲಿ ಬಯಲಾಟ ವಿಜೃಂಭಿಸುತ್ತಿದೆ. ಸರ್ಕಾರದ ಪ್ರಶಸ್ತಿ, ಪುರಸ್ಕಾರ ಅವರಿಗೆ ಮಾತ್ರ ಲಭ್ಯವಾಗುತ್ತಿವೆ. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಲೇಖಕ ಎಸ್.ನಟರಾಜ ಬೂದಾಳು ವಿಷಾದಿಸಿದರು.</p>.<p>ನಗರದಲ್ಲಿ ಬುಧವಾರ ಬಯಲಾಟ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿರುವ ಮೂರು ದಿನಗಳ ಮೂಡಲಪಾಯ ಬಯಲಾಟ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಜಿಲ್ಲೆ ಮೂಡಲಪಾಯ ಬಯಲಾಟದ ತವರು. ಇಪ್ಪತ್ತೆರಡು ಕಥೆಗಳ ಮೂಲಕ ಕಲಾವಿದರು ರಂಜಿಸುತ್ತಿದ್ದರು. ಪ್ರಸ್ತುತ ಕೇವಲ ಎರಡು ಕಥೆಗಳು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿವೆ. ಇಂತಹ ಸಾಂಸ್ಕೃತಿಕ ರಾಜಕಾರಣದಲ್ಲಿ ಗ್ರಾಮೀಣ ಪ್ರದೇಶದ ಬಯಲಾಟ ಕಲಾವಿದರ ಗೋಳು ಹೇಳತೀರದಾಗಿದೆ ಎಂದರು.</p>.<p>ಕಥೆಗಾರ ತುಂಬಾಡಿ ರಾಮಯ್ಯ, ‘ಬಯಲಾಟ ಸಂಸ್ಕೃತಿಯ ಅವಿಭಾಜ್ಯ ಅಂಗ. ಕಲೆ ನಂಬಿ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ನೆಮ್ಮದಿ ಸಿಗಬೇಕು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಬಯಲಾಟ ಕಲಿತರೆ, ಕಲೆ ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್, ‘ರಾಮ ಎಂದರೆ ಬಿಲ್ಲು, ಬಾಣ ಮತ್ತು ಅವನ ಪರಿವಾರದ ಚಿತ್ರ ನೆನಪಿಗೆ ಬರುತ್ತದೆ. ಪ್ರಸ್ತುತ ರಾಮ ಒಂಟಿಯಾಗಿದ್ದಾನೆ. ಶಬರಿಯಿಂದ ಹಣ್ಣು ಸ್ವೀಕರಿಸುವ ರಾಮನ ಮೂರ್ತಿ, ಚಿತ್ರ ಕಾಣಸಿಗುತ್ತಿಲ್ಲ. ಶ್ರೀರಾಮ ಸಾಂಸ್ಕೃತಿಕ ರಾಜಕಾರಣದಲ್ಲಿ ಸಿಲುಕಿದ್ದಾನೆ’ ಎಂದು ಹೇಳಿದರು.</p>.<p>ವಿ.ವಿ ಪ್ರಾಧ್ಯಾಪಕಿ ಅಣ್ಣಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಡಿ.ಎನ್.ಯೋಗೀಶ್ವರಪ್ಪ, ಜಿ.ಎಚ್.ಮಹದೇವಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಕರಾವಳಿಯಲ್ಲಿ ಯಕ್ಷಗಾನ ರೂಪದಲ್ಲಿ ಬಯಲಾಟ ವಿಜೃಂಭಿಸುತ್ತಿದೆ. ಸರ್ಕಾರದ ಪ್ರಶಸ್ತಿ, ಪುರಸ್ಕಾರ ಅವರಿಗೆ ಮಾತ್ರ ಲಭ್ಯವಾಗುತ್ತಿವೆ. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಲೇಖಕ ಎಸ್.ನಟರಾಜ ಬೂದಾಳು ವಿಷಾದಿಸಿದರು.</p>.<p>ನಗರದಲ್ಲಿ ಬುಧವಾರ ಬಯಲಾಟ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿರುವ ಮೂರು ದಿನಗಳ ಮೂಡಲಪಾಯ ಬಯಲಾಟ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಜಿಲ್ಲೆ ಮೂಡಲಪಾಯ ಬಯಲಾಟದ ತವರು. ಇಪ್ಪತ್ತೆರಡು ಕಥೆಗಳ ಮೂಲಕ ಕಲಾವಿದರು ರಂಜಿಸುತ್ತಿದ್ದರು. ಪ್ರಸ್ತುತ ಕೇವಲ ಎರಡು ಕಥೆಗಳು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿವೆ. ಇಂತಹ ಸಾಂಸ್ಕೃತಿಕ ರಾಜಕಾರಣದಲ್ಲಿ ಗ್ರಾಮೀಣ ಪ್ರದೇಶದ ಬಯಲಾಟ ಕಲಾವಿದರ ಗೋಳು ಹೇಳತೀರದಾಗಿದೆ ಎಂದರು.</p>.<p>ಕಥೆಗಾರ ತುಂಬಾಡಿ ರಾಮಯ್ಯ, ‘ಬಯಲಾಟ ಸಂಸ್ಕೃತಿಯ ಅವಿಭಾಜ್ಯ ಅಂಗ. ಕಲೆ ನಂಬಿ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ನೆಮ್ಮದಿ ಸಿಗಬೇಕು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಬಯಲಾಟ ಕಲಿತರೆ, ಕಲೆ ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್, ‘ರಾಮ ಎಂದರೆ ಬಿಲ್ಲು, ಬಾಣ ಮತ್ತು ಅವನ ಪರಿವಾರದ ಚಿತ್ರ ನೆನಪಿಗೆ ಬರುತ್ತದೆ. ಪ್ರಸ್ತುತ ರಾಮ ಒಂಟಿಯಾಗಿದ್ದಾನೆ. ಶಬರಿಯಿಂದ ಹಣ್ಣು ಸ್ವೀಕರಿಸುವ ರಾಮನ ಮೂರ್ತಿ, ಚಿತ್ರ ಕಾಣಸಿಗುತ್ತಿಲ್ಲ. ಶ್ರೀರಾಮ ಸಾಂಸ್ಕೃತಿಕ ರಾಜಕಾರಣದಲ್ಲಿ ಸಿಲುಕಿದ್ದಾನೆ’ ಎಂದು ಹೇಳಿದರು.</p>.<p>ವಿ.ವಿ ಪ್ರಾಧ್ಯಾಪಕಿ ಅಣ್ಣಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪದಾಧಿಕಾರಿಗಳಾದ ಡಿ.ಎನ್.ಯೋಗೀಶ್ವರಪ್ಪ, ಜಿ.ಎಚ್.ಮಹದೇವಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>