ಸರ್ವತೋಮುಖ ಬೆಳವಣಿಗೆಗೆ ಶಾರೀರಿಕ, ಮಾನಸಿಕ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಅಭಿವೃದ್ಧಿ ಅಗತ್ಯ. ಶಾಲಾ, ಕಾಲೇಜು ಓದುವ ಮಕ್ಕಳು ಮತ್ತು ಯುವಜನರಿಗೆ ಏಕಾಗ್ರತೆ, ಗ್ರಹಣಶಕ್ತಿ , ನೆನಪಿನ ಶಕ್ತಿಯನ್ನು ಸುಸ್ಥಿತಿಯಲ್ಲಿಟ್ಟು, ಆರೋಗ್ಯಪೂರ್ಣವಾಗಿ ಶೈಕ್ಷಣಿಕ ಸಾಧನೆ ಮಾಡಬೇಕೆಂಬ ದೃಷ್ಟಿಯಿಂದ ಸರ್ಕಾರ ದೈಹಿಕ ಶಿಕ್ಷಣ ಹಾಗೂ ಯೋಗವನ್ನು ಪರಿಚಯಿಸಿದೆ ಎಂದು ತಿಳಿಸಿದರು.