<p><strong>ಕೊರಟಗೆರೆ:</strong> ತಾಲ್ಲೂಕಿನ ಕ್ಯಾಮೇನಹಳ್ಳಿ ದನಗಳ ಜಾತ್ರೆ ಇದೀಗ ಜಾನುವಾರುಗಳಿಂದ ಮೈದುಂಬಿಕೊಂಡಿದೆ. ಆದರೆ ಉತ್ತರ ಕರ್ನಾಟಕದ ರೈತರು ಈವರೆಗೆ ಜಾತ್ರೆಗೆ ಬಾರದಿರುವ ಕಾರಣ ಜಾತ್ರೆ ಇನ್ನೂ ಕಳೆಕಟ್ಟಿಲ್ಲ.<br /> <br /> ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದಾರೆ. ಈ ಬಾರಿ ಜಾತ್ರೆಯಲ್ಲಿ ದೊಡ್ಡ ದುಡ್ಡಿನ ದನಗಳಿಗೆ ಬೇಡಿಕೆ ಕಡಿಮೆಯಾಗಿದೆ. ₹ 80 ಸಾವಿರ ಮೌಲ್ಯದೊಳಗಿನ ರಾಸುಗಳ ವಹಿವಾಟು ಚೆನ್ನಾಗಿ ನಡೆಯುತ್ತಿದೆ.<br /> <br /> ₹ 10 ಸಾವಿರದಿಂದ 7 ಲಕ್ಷ ಮೌಲ್ಯದ ದನಗಳು ಜಾತ್ರೆಯಲ್ಲಿವೆ. ಬೇಸಾಯದ ಕೆಲಸಕ್ಕೆ ಬರುವ ಉತ್ತಮ ಮೈಕಟ್ಟಿನ ದನಗಳು, ಬೆಳೆಸಿ ಜೋಡಿ ಮಾಡಿ ಮಾರಬಹುದಾದ ಎಳೆ ಕರುಗಳಿಗೆ ಹೆಚ್ಚು ಬೇಡಿಕೆ ಕೇಳಿ ಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಕಾಣಿಸಿಕೊಂಡ ನಂತರ ವ್ಯಾಪಾರ ಚುರುಕಾಗುತ್ತದೆ ಎನ್ನುವುದು ನಿರೀಕ್ಷೆ.<br /> <br /> <strong>ತಾಲ್ಲೂಕು ಆಡಳಿತ ವಿಫಲ:</strong> ಜಾತ್ರೆಗೆ ಸೌಲಭ್ಯ ಒದಗಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಹಿಂದೆಂದೂ ಕಾಣದಷ್ಟು ಅವ್ಯವಸ್ಥೆ ಜಾತ್ರೆಯಲ್ಲಿದೆ. ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಪ್ರತಿ ವರ್ಷ ಜಾತ್ರೆಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿತ್ತು.<br /> <br /> ಆದರೆ ಈ ಬಾರಿ ವಿದ್ಯುತ್ ದೀಪಗಳನ್ನು ಹಾಕಿಲ್ಲ. ಪ್ರತೀ ವರ್ಷ ಸ್ಥಳೀಯ ಬೋರ್ವೆಲ್ ಹೊಂದಿದವರನ್ನು ಜಾತ್ರೆಗೂ ಮುನ್ನ ಕರೆಸಿ, ಜಾತ್ರೆಗೆ ಸಾಕಾಗುವಷ್ಟು ನೀರು ಒದಗಿಸಲು ಮನವೊಲಿಸಲಾಗುತ್ತಿತ್ತು. ಆದರೆ ಈ ಬಾರಿ ಅಂಥ ಪ್ರಯತ್ನಗಳು ನಡೆಯಲೇ ಇಲ್ಲ ಎಂದು ರೈತರಾದ ಕಿರಣ್ಕುಮಾರ್ ಆರೋಪ ಮಾಡಿದರು.<br /> <br /> <strong>ಕೈ ಬಿಡದ ಉದ್ಯಮ:</strong> ರಾಸುಗಳನ್ನು ಮೇಯಿಸಿ ಮಾರುವುದನ್ನೇ ಅನೇಕರು ಹವ್ಯಾಸವಾಗಿಸಿಕೊಂಡಿದ್ದಾರೆ. ಇದು ಪೂರಕ ಆದಾಯ ತಂದುಕೊಡುವ ಆರ್ಥಿಕ ಚಟುವಟಿಕೆಯೂ ಹೌದು. <br /> <br /> ‘ನಾನು ಚಿಕ್ಕಂದಿನಿಂದ ಇದೇ ಕಸುಬು ಮಾಡಿಕೊಂಡು ಬಂದಿದ್ದೇನೆ. ಒಳ್ಳೆಯ ದನಗಳನ್ನು ಆರಿಸಿ ತಂದು, ಮನೆಯಲ್ಲಿ ಕೈಮೇವು ಕೊಟ್ಟು ಬೆಳೆಸುತ್ತೇನೆ. ನಮ್ಮ ಮನೆ ಬೆಳಗುವ ವ್ಯವಹಾರ ಇದು’ ಎಂದು ಕಲ್ಲುಗುಟ್ಟರಹಳ್ಳಿ ಗ್ರಾಮದ ಸಣ್ಣರಂಗಪ್ಪ ಹೇಳಿದರು. ಜಾತ್ರೆಗೆ ಅವರು ₹ 7 ಲಕ್ಷ ಮೌಲ್ಯದ ಜೋಡೆತ್ತು ತಂದಿದ್ದರು. ಅದು ಈ ಬಾರಿ ಜಾತ್ರೆಯಲ್ಲಿರುವ ಅತಿಹೆಚ್ಚು ಮೌಲ್ಯದ ಎತ್ತಿನ ಜೋಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊರಟಗೆರೆ:</strong> ತಾಲ್ಲೂಕಿನ ಕ್ಯಾಮೇನಹಳ್ಳಿ ದನಗಳ ಜಾತ್ರೆ ಇದೀಗ ಜಾನುವಾರುಗಳಿಂದ ಮೈದುಂಬಿಕೊಂಡಿದೆ. ಆದರೆ ಉತ್ತರ ಕರ್ನಾಟಕದ ರೈತರು ಈವರೆಗೆ ಜಾತ್ರೆಗೆ ಬಾರದಿರುವ ಕಾರಣ ಜಾತ್ರೆ ಇನ್ನೂ ಕಳೆಕಟ್ಟಿಲ್ಲ.<br /> <br /> ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದಾರೆ. ಈ ಬಾರಿ ಜಾತ್ರೆಯಲ್ಲಿ ದೊಡ್ಡ ದುಡ್ಡಿನ ದನಗಳಿಗೆ ಬೇಡಿಕೆ ಕಡಿಮೆಯಾಗಿದೆ. ₹ 80 ಸಾವಿರ ಮೌಲ್ಯದೊಳಗಿನ ರಾಸುಗಳ ವಹಿವಾಟು ಚೆನ್ನಾಗಿ ನಡೆಯುತ್ತಿದೆ.<br /> <br /> ₹ 10 ಸಾವಿರದಿಂದ 7 ಲಕ್ಷ ಮೌಲ್ಯದ ದನಗಳು ಜಾತ್ರೆಯಲ್ಲಿವೆ. ಬೇಸಾಯದ ಕೆಲಸಕ್ಕೆ ಬರುವ ಉತ್ತಮ ಮೈಕಟ್ಟಿನ ದನಗಳು, ಬೆಳೆಸಿ ಜೋಡಿ ಮಾಡಿ ಮಾರಬಹುದಾದ ಎಳೆ ಕರುಗಳಿಗೆ ಹೆಚ್ಚು ಬೇಡಿಕೆ ಕೇಳಿ ಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಕಾಣಿಸಿಕೊಂಡ ನಂತರ ವ್ಯಾಪಾರ ಚುರುಕಾಗುತ್ತದೆ ಎನ್ನುವುದು ನಿರೀಕ್ಷೆ.<br /> <br /> <strong>ತಾಲ್ಲೂಕು ಆಡಳಿತ ವಿಫಲ:</strong> ಜಾತ್ರೆಗೆ ಸೌಲಭ್ಯ ಒದಗಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಹಿಂದೆಂದೂ ಕಾಣದಷ್ಟು ಅವ್ಯವಸ್ಥೆ ಜಾತ್ರೆಯಲ್ಲಿದೆ. ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಪ್ರತಿ ವರ್ಷ ಜಾತ್ರೆಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿತ್ತು.<br /> <br /> ಆದರೆ ಈ ಬಾರಿ ವಿದ್ಯುತ್ ದೀಪಗಳನ್ನು ಹಾಕಿಲ್ಲ. ಪ್ರತೀ ವರ್ಷ ಸ್ಥಳೀಯ ಬೋರ್ವೆಲ್ ಹೊಂದಿದವರನ್ನು ಜಾತ್ರೆಗೂ ಮುನ್ನ ಕರೆಸಿ, ಜಾತ್ರೆಗೆ ಸಾಕಾಗುವಷ್ಟು ನೀರು ಒದಗಿಸಲು ಮನವೊಲಿಸಲಾಗುತ್ತಿತ್ತು. ಆದರೆ ಈ ಬಾರಿ ಅಂಥ ಪ್ರಯತ್ನಗಳು ನಡೆಯಲೇ ಇಲ್ಲ ಎಂದು ರೈತರಾದ ಕಿರಣ್ಕುಮಾರ್ ಆರೋಪ ಮಾಡಿದರು.<br /> <br /> <strong>ಕೈ ಬಿಡದ ಉದ್ಯಮ:</strong> ರಾಸುಗಳನ್ನು ಮೇಯಿಸಿ ಮಾರುವುದನ್ನೇ ಅನೇಕರು ಹವ್ಯಾಸವಾಗಿಸಿಕೊಂಡಿದ್ದಾರೆ. ಇದು ಪೂರಕ ಆದಾಯ ತಂದುಕೊಡುವ ಆರ್ಥಿಕ ಚಟುವಟಿಕೆಯೂ ಹೌದು. <br /> <br /> ‘ನಾನು ಚಿಕ್ಕಂದಿನಿಂದ ಇದೇ ಕಸುಬು ಮಾಡಿಕೊಂಡು ಬಂದಿದ್ದೇನೆ. ಒಳ್ಳೆಯ ದನಗಳನ್ನು ಆರಿಸಿ ತಂದು, ಮನೆಯಲ್ಲಿ ಕೈಮೇವು ಕೊಟ್ಟು ಬೆಳೆಸುತ್ತೇನೆ. ನಮ್ಮ ಮನೆ ಬೆಳಗುವ ವ್ಯವಹಾರ ಇದು’ ಎಂದು ಕಲ್ಲುಗುಟ್ಟರಹಳ್ಳಿ ಗ್ರಾಮದ ಸಣ್ಣರಂಗಪ್ಪ ಹೇಳಿದರು. ಜಾತ್ರೆಗೆ ಅವರು ₹ 7 ಲಕ್ಷ ಮೌಲ್ಯದ ಜೋಡೆತ್ತು ತಂದಿದ್ದರು. ಅದು ಈ ಬಾರಿ ಜಾತ್ರೆಯಲ್ಲಿರುವ ಅತಿಹೆಚ್ಚು ಮೌಲ್ಯದ ಎತ್ತಿನ ಜೋಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>