<p>ಶಿರಾ: ಕಟ್ಟಡ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸುವುದು ಅತ್ಯಗತ್ಯ ಎಂದು ಕಾರ್ಮಿಕ ವೃತ್ತ ನಿರೀಕ್ಷಕ ಪ್ರಹ್ಲಾದ್ ಹೇಳಿದರು.<br /> <br /> ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದದಲ್ಲಿ ಈಚೆಗೆ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಕಾರ್ಮಿಕರ ಗುರುತಿನ ಚೀಟಿಯು ಅಪಘಾತ, ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸ, ಶಸ್ತ್ರ ಚಿಕಿತ್ಸೆಗೆ ಪರಿಹಾರ, ಪಿಂಚಣಿ ಸೇರಿದಂತೆ 12 ಸೌಲಭ್ಯ ಪಡೆಯಲು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.<br /> <br /> ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸೌಲಭ್ಯ ಪಡೆಯಲು ಕಾರ್ಮಿಕರು ಸಂಘಟನೆ ಬಲಪಡಿಸಿಕೊಳ್ಳಬೇಕು. ಇತರೆ ಕಟ್ಟಡ ಕಾರ್ಮಿಕ ಸಹೋದ್ಯೊಗಿಗಳನ್ನು ಕಾರ್ಮಿಕ ಮಂಡಳಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಪಿಂಚಣಿಯನ್ನು ರೂ. 2 ಸಾವಿರ, ಗೃಹ ಸಾಲ 2 ಲಕ್ಷ, ಅಪಘಾತ ಪರಿಹಾರವನ್ನು ರೂ. 3 ಲಕ್ಷಕ್ಕೆ ಏರಿಸುವಂತೆ ಆಗ್ರಹಿಸಿದರು.<br /> <br /> ತಾಲ್ಲೂಕು ಅಂಗನವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವತಿ, ಮುಖಂಡರಾದ ರಂಗಪ್ಪ, ಲಕ್ಷ್ಮೀಕಾಂತರಾಜು, ರತ್ನಮ್ಮ, ಟಿ.ಎಸ್.ಹನುಮಂತರಾಯಪ್ಪ, ಡಿ.ರಂಗನಾಥಪ್ಪ, ಪುಟ್ಟಮ್ಮ, ರಂಗಶಾಮಣ್ಣ, ಶ್ರೀನಿವಾಸ್, ಚಿಕ್ಕಣ್ಣ ಉಪಸ್ಥಿತರಿದ್ದರು. ಹಳ್ಳಪ್ಪ ಸ್ವಾಗತಿಸಿದರು. ಸಂಜೀವರೆಡ್ಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ಕಟ್ಟಡ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸುವುದು ಅತ್ಯಗತ್ಯ ಎಂದು ಕಾರ್ಮಿಕ ವೃತ್ತ ನಿರೀಕ್ಷಕ ಪ್ರಹ್ಲಾದ್ ಹೇಳಿದರು.<br /> <br /> ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದದಲ್ಲಿ ಈಚೆಗೆ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಕಾರ್ಮಿಕರ ಗುರುತಿನ ಚೀಟಿಯು ಅಪಘಾತ, ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸ, ಶಸ್ತ್ರ ಚಿಕಿತ್ಸೆಗೆ ಪರಿಹಾರ, ಪಿಂಚಣಿ ಸೇರಿದಂತೆ 12 ಸೌಲಭ್ಯ ಪಡೆಯಲು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.<br /> <br /> ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸೌಲಭ್ಯ ಪಡೆಯಲು ಕಾರ್ಮಿಕರು ಸಂಘಟನೆ ಬಲಪಡಿಸಿಕೊಳ್ಳಬೇಕು. ಇತರೆ ಕಟ್ಟಡ ಕಾರ್ಮಿಕ ಸಹೋದ್ಯೊಗಿಗಳನ್ನು ಕಾರ್ಮಿಕ ಮಂಡಳಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಪಿಂಚಣಿಯನ್ನು ರೂ. 2 ಸಾವಿರ, ಗೃಹ ಸಾಲ 2 ಲಕ್ಷ, ಅಪಘಾತ ಪರಿಹಾರವನ್ನು ರೂ. 3 ಲಕ್ಷಕ್ಕೆ ಏರಿಸುವಂತೆ ಆಗ್ರಹಿಸಿದರು.<br /> <br /> ತಾಲ್ಲೂಕು ಅಂಗನವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವತಿ, ಮುಖಂಡರಾದ ರಂಗಪ್ಪ, ಲಕ್ಷ್ಮೀಕಾಂತರಾಜು, ರತ್ನಮ್ಮ, ಟಿ.ಎಸ್.ಹನುಮಂತರಾಯಪ್ಪ, ಡಿ.ರಂಗನಾಥಪ್ಪ, ಪುಟ್ಟಮ್ಮ, ರಂಗಶಾಮಣ್ಣ, ಶ್ರೀನಿವಾಸ್, ಚಿಕ್ಕಣ್ಣ ಉಪಸ್ಥಿತರಿದ್ದರು. ಹಳ್ಳಪ್ಪ ಸ್ವಾಗತಿಸಿದರು. ಸಂಜೀವರೆಡ್ಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>