ಆಗುಂಬೆ ಘಾಟಿಯು ಕರಾವಳಿ ಹಾಗೂ ಮಲೆನಾಡು ನಡುವಿನ ಪ್ರಮುಖ ಸಂಪರ್ಕ ಕೊಂಡಿ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವೆಡೆಗಳಿಂದ ಚಿಕಿತ್ಸೆ ಪಡೆಯಲು ಉಡುಪಿಗೆ ಬರುವ ರೋಗಿಗಳು ಹೆಚ್ಚಾಗಿ ಘಾಟಿ ಮಾರ್ಗವನ್ನೇ ಬಳಸುತ್ತಿದ್ದರು. ಸಂಚಾರ ನಿಷೇಧದಿಂದ ರೋಗಿಗಳಿಗೆ ತೊಂದರೆಯಾಗಿತ್ತು. ಶಿವಮೊಗ್ಗ–ಮಾಸ್ತಿಕಟ್ಟೆ–ಕುಂದಾಪುರ ಮಾರ್ಗವಾಗಿ ಉಡುಪಿಗೆ ಬಳಸಿಕೊಂಡು ಬರಬೇಕಿತ್ತು. ಈಗ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.