ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್ಗೆ ಶನಿವಾರ ಭೇಟಿ ನೀಡಿ ಮಾತನಾಡಿ, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನವನ್ನು ಅದಕ್ಕಾಗಿ ಬಳಸಲಾಗುತ್ತಿದೆ. ಇಲ್ಲದೆ ಇದ್ದಿದ್ದರೆ ವಿವಿಧ ಉತ್ಸವ, ಕಲಾವಿದರ ಮಾಸಾಶನಕ್ಕೆ ಬಳಕೆ ಮಾಡಲಾಗುತ್ತಿತ್ತು. ಸರ್ಕಾರದ ಕೆಲಸಗಳು ಅನುದಾನ ಆಧಾರಿತ ಆಗಿರುವುದರಿಂದ ಶಾಸಕರ ಮನವಿ ಪುರಸ್ಕರಿಸಿ ಅದು ಸದುಪಯೋಗವಾಗುತ್ತದೆ ಎಂಬ ದೃಷ್ಟಿಯಿಂದ ಈ ಅನುದಾನ ನೀಡಲಾಗುವುದು. ಜತೆಗೆ ಈ ಬಾರಿ ನೀಡಿದಂತೆ ಥೀಂ ಪಾರ್ಕ್ನ ನಿರ್ವಹಣಾ ವೆಚ್ಚ ವರ್ಷಕ್ಕೆ ₹ 10 ಲಕ್ಷ ಶಾಶ್ವತ ಅನುದಾನ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.