<p><strong>ಉಡುಪಿ:</strong> ಪೊಲೀಸರ ಸಮ್ಮುಖದಲ್ಲೇ ಬಜರಂಗ ದಳದ ಕಾರ್ಯಕರ್ತರು ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾರ್ಕಳ ತಾಲ್ಲೂಕಿನ ಈದುವಿನ ಜಂಗೊಟ್ಟು ಕಾಲೊನಿಯ ಸೀತಾರಾಮ ಮಲೆಕುಡಿಯ ಎಂಬುವರು ಎಸ್ಪಿಗೆ ದೂರು ನೀಡಿದ್ದಾರೆ.</p>.<p>‘ಜುಲೈ 22ರಂದು ಅಬ್ದುಲ್ ರೆಹಮಾನ್ ಎಂಬುವರು ಬಕ್ರೀದ್ ಹಬ್ಬಕ್ಕೆ ಆಡು ಖರೀದಿಸಲು ಮನೆಗೆ ಬಂದಾಗ, ತಪ್ಪಾಗಿ ತಿಳಿದ ಬಜರಂಗದಳ ಕಾರ್ಯಕರ್ತರು ಖರೀದಿಗೆ ಬಂದವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದರು. ರಾತ್ರಿ 11ಕ್ಕೆ ಮನೆಗೆ ನುಗ್ಗಿ ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಎದುರೇ ಅರೆನಗ್ನಗೊಳಿಸಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದರು. ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ಬಳಿಕ ಜಾಮೀನನ ಮೇಲೆ ಬಿಡುಗಡೆಯಾಗಿದ್ದೇನೆ’ ಎಂದು ಸೀತಾರಾಮ ಮಲೆಕುಡಿಯ ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಹಲ್ಲೆ ಘಟನೆಯಿಂದ ತುಂಬಾ ನೊಂದಿದ್ದು, ಹಲ್ಲೆ ನಡೆಸಿದವರ ಹಾಗೂ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಪೊಲೀಸರ ಸಮ್ಮುಖದಲ್ಲೇ ಬಜರಂಗ ದಳದ ಕಾರ್ಯಕರ್ತರು ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾರ್ಕಳ ತಾಲ್ಲೂಕಿನ ಈದುವಿನ ಜಂಗೊಟ್ಟು ಕಾಲೊನಿಯ ಸೀತಾರಾಮ ಮಲೆಕುಡಿಯ ಎಂಬುವರು ಎಸ್ಪಿಗೆ ದೂರು ನೀಡಿದ್ದಾರೆ.</p>.<p>‘ಜುಲೈ 22ರಂದು ಅಬ್ದುಲ್ ರೆಹಮಾನ್ ಎಂಬುವರು ಬಕ್ರೀದ್ ಹಬ್ಬಕ್ಕೆ ಆಡು ಖರೀದಿಸಲು ಮನೆಗೆ ಬಂದಾಗ, ತಪ್ಪಾಗಿ ತಿಳಿದ ಬಜರಂಗದಳ ಕಾರ್ಯಕರ್ತರು ಖರೀದಿಗೆ ಬಂದವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದರು. ರಾತ್ರಿ 11ಕ್ಕೆ ಮನೆಗೆ ನುಗ್ಗಿ ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಎದುರೇ ಅರೆನಗ್ನಗೊಳಿಸಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದರು. ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ಬಳಿಕ ಜಾಮೀನನ ಮೇಲೆ ಬಿಡುಗಡೆಯಾಗಿದ್ದೇನೆ’ ಎಂದು ಸೀತಾರಾಮ ಮಲೆಕುಡಿಯ ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಹಲ್ಲೆ ಘಟನೆಯಿಂದ ತುಂಬಾ ನೊಂದಿದ್ದು, ಹಲ್ಲೆ ನಡೆಸಿದವರ ಹಾಗೂ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>