‘ಜುಲೈ 22ರಂದು ಅಬ್ದುಲ್ ರೆಹಮಾನ್ ಎಂಬುವರು ಬಕ್ರೀದ್ ಹಬ್ಬಕ್ಕೆ ಆಡು ಖರೀದಿಸಲು ಮನೆಗೆ ಬಂದಾಗ, ತಪ್ಪಾಗಿ ತಿಳಿದ ಬಜರಂಗದಳ ಕಾರ್ಯಕರ್ತರು ಖರೀದಿಗೆ ಬಂದವರ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದರು. ರಾತ್ರಿ 11ಕ್ಕೆ ಮನೆಗೆ ನುಗ್ಗಿ ಕಾರ್ಕಳ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಎದುರೇ ಅರೆನಗ್ನಗೊಳಿಸಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದರು. ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ಬಳಿಕ ಜಾಮೀನನ ಮೇಲೆ ಬಿಡುಗಡೆಯಾಗಿದ್ದೇನೆ’ ಎಂದು ಸೀತಾರಾಮ ಮಲೆಕುಡಿಯ ದೂರಿನಲ್ಲಿ ವಿವರಿಸಿದ್ದಾರೆ.