2016ರ ಜೂನ್ 4ರಂದು ಜನ್ಮದಿನದಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಂದು ಭಕ್ತಿಗೀತೆಗಳನ್ನು ಹಾಡಿ ದೇವರಿಗೆ ಸಂಗೀತ ಸೇವೆ ನೀಡಿದ್ದರು. ಬಳಿಕ ಮಧ್ಯಾಹ್ನ ಉಡುಪಿಗೆ ಬಂದು ಕೃಷ್ಣನ ದರ್ಶನ ಪಡೆದು ಚಂದ್ರಶಾಲೆಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ‘ಬಾರೋ ಕೃಷ್ಣಯ್ಯ’, ‘ಕೃಷ್ಣ ನೀ ಬೇಗನೆ ಬಾರೋ’ ಹಾಡುಗಳನ್ನು ಹಾಡಿದ್ದರು.