<p><strong>ಕುಂದಾಪುರ (ಉಡುಪಿ):</strong> ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯದ ಮನೆಯಲ್ಲಿ ಬಾಗಿನ ನೀಡಿ, ವಾಸ್ತವ್ಯ ಮಾಡಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಈಗ ದಲಿತ ದಂಪತಿಯ ಪಾದಪೂಜೆ ನೆರವೇರಿಸಿದ್ದಾರೆ.</p>.<p>ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆಯಂಗಡಿ ಎಸ್ಸಿ ಕಾಲೊನಿ ನಿವಾಸಿ ಶಶಿಕುಮಾರ್ ಅವರ ಮನೆಗೆ ಭಾನುವಾರ ರಾತ್ರಿ ಪತ್ನಿ ಅನುರಾಧಾ ಅವರೊಂದಿಗೆ ಭೇಟಿ ನೀಡಿದ ಶಾಸಕರು, ಪಾದಪೂಜೆ ಮಾಡಿ ಅವರೊಂದಿಗೆ ಸಹ ಭೋಜನ ಸವಿದರು.</p>.<p>ಈ ವೇಳೆ ಮಾತನಾಡಿ, ‘ಸಮಾಜದ ಸಾಮರಸ್ಯಕ್ಕೆ ಅಡ್ಡ ಗೋಡೆಯಾಗಿರುವ ಅಸ್ಪೃಶ್ಯತೆಯ ಪಿಡುಗು ದೂರವಾಗಬೇಕು. ಎಲ್ಲರೂ ಒಂದು ಎನ್ನುವ ಸಾಮರಸ್ಯದ ಭಾವನೆ ಸಾಮೂಹಿಕವಾಗಿ ಜಾಗೃತವಾಗಬೇಕು ಎನ್ನುವ ಸದುದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಈ ಸಂದರ್ಭದಲ್ಲಿ ದಲಿತ ಸಮುದಾಯದ ಹಿರಿಯ ದಂಪತಿಯನ್ನು ಗೌರವಿಸಲಾಯಿತು. ಊರ ಪ್ರಮುಖರು, ದಲಿತ ಸಮುದಾಯದ ಮುಖಂಡರು, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಮರವಂತೆ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ (ಉಡುಪಿ):</strong> ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯದ ಮನೆಯಲ್ಲಿ ಬಾಗಿನ ನೀಡಿ, ವಾಸ್ತವ್ಯ ಮಾಡಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಈಗ ದಲಿತ ದಂಪತಿಯ ಪಾದಪೂಜೆ ನೆರವೇರಿಸಿದ್ದಾರೆ.</p>.<p>ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆಯಂಗಡಿ ಎಸ್ಸಿ ಕಾಲೊನಿ ನಿವಾಸಿ ಶಶಿಕುಮಾರ್ ಅವರ ಮನೆಗೆ ಭಾನುವಾರ ರಾತ್ರಿ ಪತ್ನಿ ಅನುರಾಧಾ ಅವರೊಂದಿಗೆ ಭೇಟಿ ನೀಡಿದ ಶಾಸಕರು, ಪಾದಪೂಜೆ ಮಾಡಿ ಅವರೊಂದಿಗೆ ಸಹ ಭೋಜನ ಸವಿದರು.</p>.<p>ಈ ವೇಳೆ ಮಾತನಾಡಿ, ‘ಸಮಾಜದ ಸಾಮರಸ್ಯಕ್ಕೆ ಅಡ್ಡ ಗೋಡೆಯಾಗಿರುವ ಅಸ್ಪೃಶ್ಯತೆಯ ಪಿಡುಗು ದೂರವಾಗಬೇಕು. ಎಲ್ಲರೂ ಒಂದು ಎನ್ನುವ ಸಾಮರಸ್ಯದ ಭಾವನೆ ಸಾಮೂಹಿಕವಾಗಿ ಜಾಗೃತವಾಗಬೇಕು ಎನ್ನುವ ಸದುದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಈ ಸಂದರ್ಭದಲ್ಲಿ ದಲಿತ ಸಮುದಾಯದ ಹಿರಿಯ ದಂಪತಿಯನ್ನು ಗೌರವಿಸಲಾಯಿತು. ಊರ ಪ್ರಮುಖರು, ದಲಿತ ಸಮುದಾಯದ ಮುಖಂಡರು, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಮರವಂತೆ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>