ಅವಘಡದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೇರಳದ ಶೈಲೇಶ್ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿದ್ದು, ಅವರ ಮಗ ಅರ್ಜುನ್ ಕಾರನ್ನು ಓಡಿಸುತ್ತಿದ್ದರು. ಭಾನುವಾರ ಕಡಿದಾದ ರಸ್ತೆಯಲ್ಲಿ ಚಲಾಯಿಸುವಾಗ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಬಿದ್ದಿದೆ. ಹಬ್ಬದ ಸಂದರ್ಭವಾಗಿರುವುದರಿಂದ ವಾಹನ ಮೇಲೆತ್ತುವ ಕ್ರೇನ್ ಲಭ್ಯವಾಗಿಲ್ಲ. ಸೋಮವಾರ ಮೇಲೆತ್ತಲಾಗುವುದು ಎಂದು ಪೊಲೀಸರು ತಿಳಿಸಿದರು.