ನವೋದಯದ ಕನ್ನಡ ಕಥೆಗಾರಿಕೆಗೆ ಬಹು ಹತ್ತಿರದ ಲಾಲಿತ್ಯ, ಮಲೆನಾಡಿನ ಬದುಕಿನ ಹೃದಯವಂತಿಕೆ ಹಾಗೂ ಮರೆಯಾಗುತ್ತಿರುವ ಮಲೆನಾಡಿನ ಹಳ್ಳಿಗಾಡಿನ ಪಾತ್ರಗಳನ್ನು ಹದಗೆಡದಂತೆ ‘ಪರವಶ' ಕಾದಂಬರಿ ರಚಿಸಲಾಗಿದೆ. ದವನ ಸೊರಬ ಅವರ ಮೂರನೆ ಕಾದಂಬರಿ ಇದಾಗಿದೆ. ಮನೆತನದ ದುರಂತವನ್ನು ನಿಸರ್ಗ ನಾಶದಿಂದಾಗುವ ದುರಂತದ ಪರ್ಯಾಯ ವಾಚಕವಾಗಿ ಚಿತ್ರಿಸಿರುವ ಸಹಜ ಸೊಬಗನ್ನು ಗುರುತಿಸಿ ಕಾದಂಬರಿಯನ್ನು ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ ಎಂದು ಸಂಚಾಲಕ ಪ್ರೊ.ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.