ಉಡುಪಿಯಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ತಮಿಳುನಾಡು, ದೆಹಲಿ, ಮುಂಬೈ ಸೇರಿದಂತೆ ಉತ್ತರ ಭಾರತ ಮೂಲದ ಹೆಚ್ಚಿನವರು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಪ್ರಾದೇಶಿಕ ಭಾಷೆಗಳ ಅರಿವಿಲ್ಲ. ಅವರಿಗೂ ಕೊರೊನಾ ಜಾಗೃತಿ ಸಂದೇಶ ತಲುಪಲಿ ಎಂಬ ಉದ್ದೇಶದಿಂದ ಧ್ವನಿಮುದ್ರಿಕೆ ಸಿದ್ಧಪಡಿಸಲಾಗಿದೆ ಎಂದು ಉಡುಪಿ ಕೊರೊನಾ ವಾರಿಯರ್ಸ್ ತಂಡದ ದೀಪಕ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.