ಉಡುಪಿ: ಲಾಕ್ಡೌನ್ ಜಾರಿಯಾದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ವ್ಯಾಪಾರಿಗಳು ಮೂಲವೃತ್ತಿ ಬಿಟ್ಟು ಅನ್ಯವೃತ್ತಿಯತ್ತ ಚಿತ್ತ ಹರಿಸಿದ್ದಾರೆ. ಜ್ಯೂಸ್ ಸೆಂಟರ್ಗಳು, ಸಣ್ಣ ಹೋಟೆಲ್ಗಳು ತರಕಾರಿ ಮಾರಾಟ ಮಳಿಗೆಗಳಾಗಿ ಬದಲಾಗಿವೆ. ಬಡಗಿಗಳು, ಕ್ಷೌರಿಕರು, ಕೂಲಿ ಕಾರ್ಮಿಕರು ರಸ್ತೆ ಬದಿಗಳಲ್ಲಿ ಹಣ್ಣು, ತರಕಾರಿ ವ್ಯಾಪಾರ ಶುರು ಮಾಡಿದ್ದಾರೆ.