<p><strong>ಉಡುಪಿ: </strong>ಪೇಟಿಎಂ ಫಾಸ್ಟ್ ಟ್ಯಾಗ್ ಸರಿಪಡಿಸುವುದಾಗಿ ನಂಬಿಸಿ ಒಟಿಪಿ ಪಡೆದುಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹ 99,997 ದೋಚಲಾಗಿದೆ.</p>.<p>ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ವಂಚನೆಗೊಳಗಾದವರು. ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಗೂಗಲ್ನಲ್ಲಿ ದೊರೆತ ಮೊಬೈಲ್ ನಂಬರ್ಗೆ ಫ್ರಾನ್ಸಿಸ್ ಕರೆ ಮಾಡಿದಾಗ, ಪೇಟಿಎಂ ಫಾಸ್ಟ್ ಟ್ಯಾಗ್ ವೆಬ್ಸೈಟ್ ಅಧಿಕಾರಿ ಎಂದು ವಂಚಕ ಪರಿಯಿಸಿಕೊಂಡಿದ್ದಾನೆ.</p>.<p>ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದು ಮೊಬೈಲ್ಗೆ ಬಂದ ಒಟಿಪಿ ಪಡೆದುಕೊಂಡು ಫ್ರಾನ್ಸಿಸ್ ಖಾತೆಯಿಂದ ಕ್ರಮವಾಗಿ, ₹ 49,000, ₹ 19,999, ₹ 19998, ₹ 9,999, ₹ 1,000ದಂತೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.</p>.<p>ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಗಾಂಜಾ ಸೇವನೆ<br />ಉಡುಪಿ: </strong>ಮಣಿಪಾಲದ ವಿದ್ಯಾರತ್ನ ನಗರದ ಆಸ್ತಾ ಅಬೋಡ್ ಅಪಾರ್ಟ್ಮೆಂಟ್ ಬಳಿಕ ಗಾಂಜಾ ಸೇವನೆ ಮಾಡಿದ ಆರೋಪ ಮೇಲೆ ಮೋಹಿತ್ ಖರೆ ಹಾಗೂ ಸಾಕ್ಷಿ ಶ್ರೀಯಾನ್ ಎಂಬುವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ಇಬ್ಬರನ್ನೂ ವಶಕ್ಕೆ ಪಡೆದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಪೇಟಿಎಂ ಫಾಸ್ಟ್ ಟ್ಯಾಗ್ ಸರಿಪಡಿಸುವುದಾಗಿ ನಂಬಿಸಿ ಒಟಿಪಿ ಪಡೆದುಕೊಂಡು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹ 99,997 ದೋಚಲಾಗಿದೆ.</p>.<p>ಫ್ರಾನ್ಸಿಸ್ ಪಿಯುಸ್ ಪುಟಾರ್ಡೋ ವಂಚನೆಗೊಳಗಾದವರು. ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಗೂಗಲ್ನಲ್ಲಿ ದೊರೆತ ಮೊಬೈಲ್ ನಂಬರ್ಗೆ ಫ್ರಾನ್ಸಿಸ್ ಕರೆ ಮಾಡಿದಾಗ, ಪೇಟಿಎಂ ಫಾಸ್ಟ್ ಟ್ಯಾಗ್ ವೆಬ್ಸೈಟ್ ಅಧಿಕಾರಿ ಎಂದು ವಂಚಕ ಪರಿಯಿಸಿಕೊಂಡಿದ್ದಾನೆ.</p>.<p>ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಪಡೆದು ಮೊಬೈಲ್ಗೆ ಬಂದ ಒಟಿಪಿ ಪಡೆದುಕೊಂಡು ಫ್ರಾನ್ಸಿಸ್ ಖಾತೆಯಿಂದ ಕ್ರಮವಾಗಿ, ₹ 49,000, ₹ 19,999, ₹ 19998, ₹ 9,999, ₹ 1,000ದಂತೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.</p>.<p>ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಗಾಂಜಾ ಸೇವನೆ<br />ಉಡುಪಿ: </strong>ಮಣಿಪಾಲದ ವಿದ್ಯಾರತ್ನ ನಗರದ ಆಸ್ತಾ ಅಬೋಡ್ ಅಪಾರ್ಟ್ಮೆಂಟ್ ಬಳಿಕ ಗಾಂಜಾ ಸೇವನೆ ಮಾಡಿದ ಆರೋಪ ಮೇಲೆ ಮೋಹಿತ್ ಖರೆ ಹಾಗೂ ಸಾಕ್ಷಿ ಶ್ರೀಯಾನ್ ಎಂಬುವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ಇಬ್ಬರನ್ನೂ ವಶಕ್ಕೆ ಪಡೆದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>