ಉಡುಪಿ: ವಿಜಯ ದಶಮಿಯ ಪರ್ವಕಾಲದಲ್ಲಿ ಕೃಷ್ಣಮಠದಿಂದ ವಾರ್ಷಿಕ ಫೌಂಜಿಯು ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡಿತು.
ಮಠದ ಪರವಾಗಿ ಮೆರವಣಿಗೆಯಲ್ಲಿ ಬಂದಿದ್ದ ವಿದ್ವಾಂಸರನ್ನು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಕಟ್ಟೆ ರವಿರಾಜ ವಿ.ಆಚಾರ್ಯ ನೇತೃತ್ವದಲ್ಲಿ ಸಮಿತಿಯ ಸದಸ್ಯರು, ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು.
ಸಾಂಪ್ರದಾಯಿಕ ಶಿಷ್ಟಾಚಾರಗಳೊಂದಿಗೆ ಆತಿಥ್ಯ ನೀಡಲಾಯಿತು. ಶ್ರೀರಂಗ ಉಪಾಧ್ಯಾಯರು ದೇವಸ್ಥಾನದ ಆವರಣದಲ್ಲಿ ಶಮಿ ವೃಕ್ಷ ಪೂಜೆ ನೆರವೇರಿಸಿದರು. ಶಮೀವೃಕ್ಷ ಪೂಜೆಯ ಬಳಿಕ ದೇವಿಯ ದರ್ಶನ ಪಡೆಯಲಾಯಿತು.