ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮಠದಿಂದ ಕಡಿಯಾಳಿ ದೇವಸ್ಥಾನಕ್ಕೆ ಬಂದ ಫೌಂಜಿ

Last Updated 5 ಅಕ್ಟೋಬರ್ 2022, 16:01 IST
ಅಕ್ಷರ ಗಾತ್ರ

ಉಡುಪಿ: ವಿಜಯ ದಶಮಿಯ ಪರ್ವಕಾಲದಲ್ಲಿ ಕೃಷ್ಣಮಠದಿಂದ ವಾರ್ಷಿಕ ಫೌಂಜಿಯು ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡಿತು.

ಮಠದ ಪರವಾಗಿ ಮೆರವಣಿಗೆಯಲ್ಲಿ ಬಂದಿದ್ದ ವಿದ್ವಾಂಸರನ್ನು ‌‌ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಕಟ್ಟೆ ರವಿರಾಜ ವಿ.ಆಚಾರ್ಯ ನೇತೃತ್ವದಲ್ಲಿ ಸಮಿತಿಯ ಸದಸ್ಯರು, ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು.

ಸಾಂಪ್ರದಾಯಿಕ ಶಿಷ್ಟಾಚಾರಗಳೊಂದಿಗೆ ಆತಿಥ್ಯ ನೀಡಲಾಯಿತು. ಶ್ರೀರಂಗ ಉಪಾಧ್ಯಾಯರು ದೇವಸ್ಥಾನದ ಆವರಣದಲ್ಲಿ ಶಮಿ ವೃಕ್ಷ ಪೂಜೆ ನೆರವೇರಿಸಿದರು. ಶಮೀವೃಕ್ಷ ಪೂಜೆಯ ಬಳಿಕ ದೇವಿಯ ದರ್ಶನ ಪಡೆಯಲಾಯಿತು.

ಮಠದ ವಿದ್ವಾಂಸರಾದ ಶ್ರೀನಿವಾಸ ಉಪಾಧ್ಯ, ಗೋಪಾಲಕೃಷ್ಣ ಉಪಾಧ್ಯ, ರಘುರಾಮ ಬಲ್ಲಾಳ್, ಜನಾರ್ದನ ಮೇಳಂತ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT