ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಉಡುಪ, ‘ಹುಟ್ಟಿದ ಹಳ್ಳಿಯಲ್ಲೇ ಸೇವೆ ಮಾಡುವುದಾದರೆ ವೈದ್ಯಕೀಯ ಕೋರ್ಸ್ ಮಾಡಬಹುದು ಎನ್ನುವ ತಂದೆಯ ಮಾತಿಗೆ ಕಟಿಬದ್ದನಾಗಿ ವೈದ್ಯನಾದೆ. ಸರ್ಕಾರಿ ಸೇವೆಗೆ ಅವಕಾಶ ದೊರೆತರೂ ತೆರಳದೆ, ಆರ್ಡಿಯಲ್ಲಿ ಕ್ಲಿನಿಕ್ ಆರಂಭಿಸಿದೆ. ಮೂಲ ಸೌಕರ್ಯವಿಲ್ಲದ ಕಾಲದಲ್ಲಿ ಹಗಲು ರಾತ್ರಿಎನ್ನದೆ ನಡೆದಾಡಿ ಸೇವೆ ನೀಡಿದ ಸಂತೃಪ್ತಿಯಿದೆ. ಗ್ರಾಮೀಣ ಭಾಗದಲ್ಲಿಯೇ ಸೇವೆ ಸಲ್ಲಿಸುತ್ತಾ ಐವತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಈ ವರ್ಷ ಪ್ರತಿ ತಿಂಗಳ 28ನೇ ದಿನಾಂಕದಂದು ಆರ್ಡಿಯಲ್ಲಿರುವ ಕ್ಲಿನಿಕ್ನಲ್ಲಿ ರೋಗಿಗಳಿಗೆ ಉಚಿತ ಸೇವೆ ನೀಡಲಿದ್ದೇನೆ’ ಎಂದರು.
ಉದ್ಯಮಿ ಪ್ರಶಾಂತ್ ಶೆಟ್ಟಿ ಆರ್ಡಿ, ಸುರೇಶ್ ಶೆಟ್ಟಿ ಆರ್ಡಿ, ಉದಯ ಪ್ರಸಾದ್ ಆರ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಯದೇವ ಹೆಗ್ಡೆ ನೂಜೆಟ್ಟು, ಗ್ರಾಮ ಪಂಚಾಯಿತಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಉಮೇಶ್ ಆರ್ಡಿ ಕೆರ್ಜಾಡಿ, ಬಾಲಕೃಷ್ಣ ಶೆಣೈ, ಪ್ರಕಾಶ್ ಶೆಣೈ, ಅನಿವಾಸಿ ಭಾರತೀಯ ಆರ್ಡಿ ಮಳಿಗೆಮನೆ ಸಂತೋಷ ಶೆಟ್ಟಿ, ಆನಂದ ಶೆಟ್ಟಿ ನೀರ್ಗಡಿಗೆ, ಅರುಣ್ ಅರಸಮ್ಮಕಾನು, ಪವನ್ ಶೆಟ್ಟಿ ಆರ್ಡಿ ಇದ್ದರು.